Friday, May 3, 2024
spot_imgspot_img
spot_imgspot_img

ಅಳಿಕೆ: ಅಳಿಕೆ ಗ್ರಾಮದ ಕಾಂಗ್ರೇಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ..!

- Advertisement -G L Acharya panikkar
- Advertisement -

ಅಳಿಕೆ: ಅಳಿಕೆ ಗ್ರಾಮದ ಕಾಂಗ್ರೇಸಿನ ಸಕ್ರೀಯ ಕಾರ್ಯಕರ್ತ ಗೋಪಾಲ ಬೀಮಾವರ ಸಹಿತ ಹಲವಾರು ಮಂದಿ ಕಾಂಗ್ರೇಸ್ ಪಾರ್ಟಿಯನ್ನು ತ್ಯಜಿಸಿ ಈ ದೇಶಕ್ಕೆ ಮೋದಿ ಅನಿವಾರ್ಯ ಮತ್ತು ಸ್ಥಳೀಯ ನಾಯಕರ ವರ್ತನೆಗೆ ಬೇಸತ್ತು ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಕೃಷ್ಣ ಆಳ್ವಾರವರ ಸಮ್ಮಖದಲ್ಲಿ ಬಿಜೆಪಿ ಸೇರಿದರು.

ಈ ಸಂದರ್ಭದಲ್ಲಿ ಪುತ್ತೂರು ಬಿಜೆಪಿ ಚುನಾವಣಾ ಉಸ್ತುವಾರಿ ಸುಲೋಚನ ಜಿ.ಕೆ.ಭಟ್, ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ,ಬಿಜೆಪಿ ಉಪಾಧ್ಯಕ್ಷರು ಹಾಗೂ ಪುಣಚ ಮಹಾಶಕ್ತೀ ಕೇಂದ್ರ ಅಧ್ಯಕ್ಷ ಹರಿಪ್ರಸಾದ್ ಯಾದವ್, ಪುಣಚ ಮಹಾಶಕ್ತೀ ಕೇಂದ್ರ ಚುನಾವಣ ಪ್ರಭಾರಿ ಸಹಜ್ ರೈ ಬಳಜ್ಜ,ಮಹಾಶಕ್ತಿ ಕೇಂದ್ರ ಕಾರ್ಯದರ್ಶಿ ದಯಾನಂದ ಶೆಟ್ಟಿ ಉಜ್ರೆಮಾರ್,ಶಕ್ತೀ ಕೇಂದ್ರ ಸಂಚಾಲಕ ಸದಾನಂದ ಶೆಟ್ಟಿ, ಪಕ್ಷದ ಪ್ರಮುಖ ಕಾನ ಈಶ್ವರ ಭಟ್, ಬೂತ್ ಅಧ್ಯಕ್ವ ಸೌಜೀವ ಗೌಡ,ಸದಾಶಿವ ಅಳಿಕೆ,ವಧ್ವ ಈಶ್ವರ ಭಟ್, ಉದಯ್ ಕುಮಾರ್,ರಿತೇಶ್,ಮೊದಲಾದ ಹಿರಿಯ ಕಿರಿಯ ಕಾರ್ಯಕರ್ತರು ಉಪಸ್ಥಿತರಿದ್ದರು.

- Advertisement -

Related news

error: Content is protected !!