ಅಳಿಕೆ : ಶ್ರೀ ಪಿಲಿಚಾಮುಂಡಿ [ಕಲ್ಲೆಂಚಿನಾಯ) ದೈವಸ್ಥಾನ ಕಲ್ಲೆಂಚಿಪಾದೆ-ಅಳಿಕೆ ಪುನರ್ ಪ್ರತಿಷ್ಠೆ ಕಲಶಾಭಿಷೇಕ ಮತ್ತು ನೇಮೋತ್ಸವ ನಡೆಯಿತು.
ದಿನಾಂಕ : 25-04-2024ನೇ ಗುರುವಾರ ಬೆಳಿಗ್ಗೆ ಗಂಟೆ 11-00ಕ್ಕೆ ಗ್ರಾಮದ ಎಲ್ಲಾ ಭಾಗಗಳಿಂದ ಹಸಿರುವಾಣಿಯು ಬೆಳಿಗ್ಗೆ ಗಂಟೆ 10:30ಕ್ಕೆ ಮಡಿಯಾಲ ಗೋಪಾಲಕೃಷ್ಣ ದೇವಸ್ಥಾನಕ್ಕೆ ಬಂದು ನಂತರ ಹಸಿರುವಾಣಿ ಮೆರವಣಿಗೆ ಮಡಿಯಾಲ ಗೋಪಾಲಕೃಷ್ಣ ದೇವಸ್ಥಾನದಿಂದ ಹೊರಟು ಮಧ್ಯಾಹ್ನ 12-30 ರಿಂದ ಅನ್ನಸಂತರ್ಪಣೆ ನಡೆಯಿತು.
ಸಂಜೆ 5-00ರಿಂದ ತಂತ್ರಿಗಳ ಆಗಮನ, ಶಿಲ್ಪಿಗಳಿಂದ ಸ್ಥಾನ ಪರಿಗ್ರಹ ಪಂಚಗವ್ಯ, ಪುಣ್ಯಾಹವಾಚನ, ಪ್ರಸಾದ ಶುದ್ದಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ಪ್ರಯಶ್ಚಿತ್ತ ಕಲಶಾಭಿಷೇಕ, ಪೀಠಾಧಿವಾಸ, ಪ್ರಕಾರ ಬಲಿ, ವಾಸ್ತು ಪೂಜೆ ನಡೆಯಿತು. ಸಂಜೆ 6-00ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಸ್ಥಳೀಯ ಪ್ರತಿಭೆಗಳಿಂದ ವಿವಿಧ ವಿನೋದಾವಳಿಗಳು ಬಳಿಕ ರಾತ್ರಿ ಗಂಟೆ 8.30ಕ್ಕೆ ಅನ್ನಸಂತರ್ಪಣೆ ನಡೆಯಿತು.
ಏಪ್ರಿಲ್ 26 ರಂದು ಬೆಳಿಗ್ಗೆ ಗಂಟೆ 9.24ಕ್ಕೆ ಮಿಥುನ ಲಗ್ನ ಸುಮುಹೂರ್ತದಲ್ಲಿ ನೂತನ ಆರೋಧದಲ್ಲಿ ಗ್ರಾಮ ದೈವವಾದ ಶ್ರೀ ಪಿಲಿಚಾಮುಂಡಿ ದೈವವನ್ನು ಶ್ರೀ ಕಲ್ಲೆಂಚಿನಾಯ ಎಂಬ ಹೆಸರಿನಲ್ಲಿ ಶಿಲಾ ಪೀಠದಲ್ಲಿ ಪ್ರತಿಷ್ಠೆ, ಕಲಶಾಭಿಷೇಕ, ಅಲಂಕಾರ ಪೂಜೆ, ತಂಬಿಲ, ನಂತರ ಪ್ರಸಾದ ವಿತರಣೆ ನಡೆಯಿತು. ಮಧ್ಯಾಹ್ನ1:00 ರಿಂದ ಅನ್ನಸಂರ್ಪಣೆ ನಡೆಯಿತು. ಸಂಜೆ 5:00ಕ್ಕೆ ಅಳಿಕೆ ಗುತ್ತು ಮನೆಯಿಂದ ಶ್ರೀ ಪಿಲಿಚಾಮುಂಡಿ( ಕಲ್ಲೆಂಚಿನಾಯ) ದೈವದ ಭಂಢಾರ ಹೊರಟು ನೂತನ ದೈವಸ್ಥಾನದಲ್ಲಿ ಭಂಢಾರ ಏರಿ ,ತಂಬಿಲಸೇವೆ ಎಣ್ಣೆಬೂಳ್ಯ ಬಳಿಕ ರಾತ್ರಿ 9:00 ಅನ್ನಸಂತರ್ಪಣೆ ನಡೆಯಿತು. ಬಳಿಕ ರಾತ್ರಿ 9:30 ರಿಂದ ದೈವದ ನೇಮೋತ್ಸವ ನಡೆಯಿತು.