- Advertisement -
- Advertisement -
ವಿಟ್ಲ: ರಸ್ತೆ ಅಪಘಾತದಲ್ಲಿ ಗಾಯಗೊಂಡ ಬಂಟ್ವಾಳದ ವಿನಯ ಕುಮಾರ್ ಇವರಿಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವಿಟ್ಲ ಘಟಕದ ಕಾರ್ಯಕರ್ತರ ನೇತೃತ್ವದಲ್ಲಿ 30000 ಧನಸಹಾಯವನ್ನು ದಿನಾಂಕ 21-03-2021ರಂದು ನೀಡಲಾಯಿತು.
ಅದೇ ರೀತಿ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ಸಾಲೆತ್ತೂರು ಮೂಲದ ಪುಟ್ಟ ಕಂದಮ್ಮ ಯದ್ವಿತ್ ಇವರಿಗೆ ದಿನಾಂಕ 15-04-2021ರಂದು 20000 ಸಹಾಯಧನ ನೀಡಲಾಯಿತು.
ವಿಟ್ಲ ಪದವಿ ಪೂರ್ವ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಸೇವಾಮನೋಭಾವಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ವಿಟ್ಲ ಪದವಿ ಪೂರ್ವ ಘಟಕದ ಅಧ್ಯಕ್ಷರಾದ ಚೇತನ್ ಒಕ್ಕೆತ್ತೂರು, ಕಾರ್ಯದರ್ಶಿ ಸಂಜಯ್ ವಿಟ್ಲ ದಿನೇಶ್ ಕುಡ್ತಮುಗೇರ್ A.B.V.P ವಿಟ್ಲ ನಗರ ಕಾರ್ಯದರ್ಶಿ ಹಾಗೂ ಕಾರ್ಯಕರ್ತ ಮಿತ್ರರು ಜೊತೆಗಿದ್ದರು.
- Advertisement -