Monday, May 6, 2024
spot_imgspot_img
spot_imgspot_img

ಮದುವೆಯಾದ ಮೂರನೇ ದಿನಕ್ಕೆ ಬೈಕ್ ಅಪಘಾತದಲ್ಲಿ ಬಲಿಯಾದ ಯುವಕ

- Advertisement -G L Acharya panikkar
- Advertisement -

ಮದುವೆಯಾದ ಮೂರನೇ ದಿನಕ್ಕೆ ಯುವಕನೋರ್ವ ಬೈಕ್ ಅಪಘಾತದಲ್ಲಿ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಬೀದರ್ ನಲ್ಲಿ ನಡೆದಿದೆ. ಕೋಳಾರ ಕೈಗಾರಿಕಾ ಪ್ರದೇಶದಲ್ಲಿ ಬಳಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ‌ಸಂಸ್ಥತೆಯ ಬಸ್ ಬೈಕ್​​ಗೆ ಡಿಕ್ಕಿ ಹೊಡೆದ ಪರಿಣಾಮ ಯುವಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಕಮಲನಗರ ತಾಲೂಕಿನ ಬಳತ್ ಗ್ರಾಮದ ಅರುಣ ಕಾಶಿನಾಥ ಪಡಸಾಲೆ (33) ಮೃತಪಟ್ಟ ಯುವಕ.
ಕಳೆದ ಜೂ. 29 ರಂದು ಮದುವೆಯಾಗಿದ್ದ ಅರುಣ ಕಾಶಿನಾಥ, ತನ್ನ ಪತ್ನಿ ಗ್ರಾಮ ಹುಮನಾಬಾದ ತಾಲೂಕಿನ ಮುಗನೂರ್‌ನಿಂದ ನೌಬಾದ್‌ಗೆ ಬೈಕ್ ಮೇಲೆ ವಾಪಸ್ ಬರುವಾಗ ಸರ್ಕಾರಿ ಬಸ್‌ಗೆ ಡಿಕ್ಕಿ ಆಗಿದೆ. ತೀವ್ರ ರಕ್ತಸ್ರಾವವಾದ ಹಿನ್ನಲೆ ಅರುಣ ಕಾಶಿನಾಥ ಸ್ಥಳದಲ್ಲೇ ಮೃಪಟ್ಟಿದ್ದಾನೆ.

- Advertisement -

Related news

error: Content is protected !!