Saturday, April 20, 2024
spot_imgspot_img
spot_imgspot_img

ಸಿಎಂ ಕೋವಿಡ್​ ಪರಿಹಾರ ನಿಧಿಗೆ ಅರಣ್ಯ ಅಭಿವೃದ್ಧಿ ನಿಗಮದಿಂದ ₹25 ಲಕ್ಷ ಚೆಕ್ ಹಸ್ತಾಂತರಿಸಿದ ನಟಿ ತಾರಾ

- Advertisement -G L Acharya panikkar
- Advertisement -

ಬೆಂಗಳೂರು: ಕೊರೊನ ಎರಡನೇ ಅಲೆಯ ಅಬ್ಬರಕ್ಕೆ ಜನ ತತ್ತರಿಸಿ ಹೋಗ್ತಿದ್ದಾರೆ. ಅದೆಷ್ಟೋ ಜನ ಆಸ್ಪತ್ರೆಯಲ್ಲಿ ಬೆಡ್​ ಸಿಗದೇ ನರಳಾಡಿ ಪ್ರಾಣ ತೆರಳುತ್ತಿದ್ದಾರೆ.

ಕೊರೊನಾ ಪರಿಹಾರ ನಿಧಿಗಾಗಿ ಅದೆಷ್ಟೋ ಜನ ಪಿಎಂ ಕೇರ್​ ಹಾಗೂ ಮುಖ್ಯಮಂತ್ರಿ ಪರಿಹಾರ ನಿಧಿಗೆ ಫಂಡ್​ ನೀಡ್ತಿದ್ದಾರೆ. ಸದ್ಯ ನಟಿ ತಾರಾ 25 ಲಕ್ಷ ರೂಪಾಯಿ ಚೆಕ್​ ಅನ್ನ ಮುಖ್ಯಮಂತ್ರಿ ಬಿ.ಎಸ್​ ಉಡಿಯೂರಪ್ಪ ಕೈಗೆ ಹಸ್ತಾಂತರಿಸಿದ್ದಾರೆ.

ಅರಣ್ಯ ಅಭಿವೃದ್ಧಿ ನಿಗಮದ ವತಿಯಿಂದ ಮುಖ್ಯಮಂತ್ರಿಗಳ ಕೋವಿಡ್​-19 ಪರಿಹಾರ ನಿಧಿಗೆ 25 ಲಕ್ಷ ರೂಪಾಯಿ ದೇಣಿಗೆ ನೀಡಲಾಗಿದೆ. ನಟಿ ತಾರಾ ಅನುರಾಧ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದು, ಈ ಚೆಕ್​ ಅನ್ನ ಮುಖ್ಯಮಂತ್ರಿಗಳಿಗೆ ಇಂದು ಹಸ್ತಾಂತರಿಸಿದ್ದಾರೆ. ನಿಗಮದ ವ್ಯವಸ್ಥಾಪಕ ನಿರ್ದೇಶಕ ಪುನೀತ್ ಪಾಠಕ್ ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

driving
- Advertisement -

Related news

error: Content is protected !!