Saturday, April 20, 2024
spot_imgspot_img
spot_imgspot_img

ವಿಟ್ಲ: ಎಸ್ ಡಿ ಪಿ ಐ ಕಚೇರಿಗೆ ಬೆಂಕಿ ಹಚ್ಚಿದ ಪ್ರಕರಣ – ಹಿಂದೂ ಸಂಘಟನೆ ಮುಖಂಡ ಅಕ್ಷಯ್ ರಜಪೂತ್ ಗೆ ನಿರೀಕ್ಷಣಾ ಜಾಮೀನು

- Advertisement -G L Acharya panikkar
- Advertisement -

ವಿಟ್ಲ: ಕೆಲ ದಿನಗಳ ಹಿಂದೆ ಎಸ್ ಡಿ ಪಿ ಐ ಕಛೇರಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಟ್ಲ ಠಾಣೆಯಲ್ಲಿ ಹಿಂದೂ ಸಂಘಟನೆಯ ಮುಖಂಡ ಅಕ್ಷಯ ರಜಪೂತ್ ವಿರುದ್ಧ ಕೇಸು ದಾಖಲಾಗಿತ್ತು.ಸಾಮಾಜಿಕ ಜಾಲತಾಣದಲ್ಲಿ ಉಜಿರೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದವರ ವಿರುದ್ಧ ಎಸ್ ಡಿ ಪಿ ಐ ಬಂಟ್ವಾಳ ಉಜಿರೆ ಭಾಗದ ಕಾರ್ಯಾಲಯಕ್ಕೆ ಬೆಂಕಿ ಯಾಕೆ ಕೊಡಬಾರದು ಎಂಬ ಸಂದೇಶವನ್ನು ಹರಿ ಬಿಟ್ಟು ಪ್ರಚೋದನೆ ನೀಡಿದ ಹಿನ್ನಲೆಯಲ್ಲಿ ಅಕ್ಷಯ ರಜಪೂತ್ ಕಲ್ಲಡ್ಕ ಪ್ರಕರಣದ ಪ್ರಮುಖ ಆರೋಪಿ ಮತ್ತು ಇತರರ ಮೇಲೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದೀಗ ಮಂಗಳೂರಿನ ನಾಲ್ಕನೇ ಹೆಚ್ಚುವರಿ ಜಿಲ್ಲಾ ನ್ಯಾಯಲಯದಲ್ಲಿ ಅಕ್ಷಯ ರಜಪೂತ್ ಗೆ ನಿರೀಕ್ಷಣಾ ಜಾಮೀನು ಸಿಕ್ಕಿದೆ. ಅಕ್ಷಯ ರಜಪೂತ್ ಪರವಾಗಿ ಮಂಗಳೂರಿನ ಖ್ಯಾತ ವಕೀಲರಾದ ಕಿಶೋರ್ ಕುಮಾರ್,ರಾಜೇಶ್ ಬೊಳ್ಳುಕಲ್ಲು ಮತ್ತು ಚಿನ್ಮಯ್ ಈಶ್ವರಮಂಗಳ ವಾದಿಸಿದ್ದಾರೆ.

- Advertisement -

Related news

error: Content is protected !!