Tuesday, June 23, 2026
spot_imgspot_img
spot_imgspot_img

ಆಲಂಕಾರು: ಚಲಿಸುತ್ತಿದ್ದ ಓಮ್ನಿ ಕಾರು ಬೆಂಕಿಗಾಹುತಿ

- Advertisement -
- Advertisement -

ಆಲಂಕಾರು: ಓಮ್ನಿ ಕಾರೊಂದು ಸಂಪೂರ್ಣ ಬೆಂಕಿಗಾಹುತಿಯಾದ ಘಟನೆ ಆಲಂಕಾರು ಸಮೀಪದ ಪೆರಾಬೆ ಗ್ರಾಮದ ಕುಂತೂರಿನಲ್ಲಿ ನಡೆದಿದೆ.

ಕುಂತೂರು ಗ್ರಾಮದ ಕೆದ್ದೊಟ್ಟೆ ನಿವಾಸಿ ಕೆ.ಎಂ.ಶಿವಪ್ರಸಾದ್ ಎಂಬವರು ತನ್ನ ಒಮ್ನಿ ಕಾರಿನಲ್ಲಿ ಬೆಳಿಗ್ಗೆ ಮನೆಯಿಂದ ಮಕ್ಕಳನ್ನು ಕರೆದುಕೊಂಡು ಬಂದು ಶಾಲೆಗೆ ಬಿಟ್ಟು ಮತ್ತೆ ಮನೆಗೆ ಹೋಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.

ಕುಂತೂರುಪದವು-ಕೆದ್ದೊಟ್ಟೆ ಮಾರ್ಗದ ಪಂಜಳ ಎಂಬಲ್ಲಿಗೆ ತಲುಪುತ್ತಿದ್ದಂತೆ ಒಮ್ನಿ ಕಾರಿನಲ್ಲಿ ಹೊಗೆ ಕಾಣಿಸಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಅವರು ಒಮ್ನಿ ಕಾರು ನಿಲ್ಲಿಸಿ ಚಾಲಕನ ಸೀಟ್ ತೆಗೆಯುತ್ತಿದ್ದಂತೆ ಬೆಂಕಿಯ ಕಿಡಿ ಅವರ ಕೈ ಹಾಗೂ ಮುಖಕ್ಕೆ ತಾಗಿ ಸುಟ್ಟ ಗಾಯವಾಗಿದೆ.

ಬೆಂಕಿಯಿಂದಾಗಿ ಒಮ್ನಿ ಕಾರು ಸಂಪೂರ್ಣ ಸುಟ್ಟು ಹೋಗಿದ್ದು, ಬ್ಯಾಟರಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಅನಾಹುತ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ.

- Advertisement -

Related news

error: Content is protected !!