ಖರ್ಚಿಗೆ ಹಣವಿಲ್ಲ ಎಂದು ಪೇಪರ್ ಮಾರಲು ಹೋದ ಯುವಕ ಗುಜರಿ ಅಂಗಡಿ ಮೇಲೆಯೇ ಎಫ್ಐಆರ್ ದಾಖಲಿಸಿದ ಘಟನೆ ನಡೆದಿದೆ. ನ್ಯೂಸ್ ಪೇಪರ್ ಮಾರಲು ಹೋಗಿದ್ದ ಜೀವನ್ ಪ್ರಸಾದ್ ಎಂಬ ಯುವಕನಿಗೆ ಗುಜರಿ ಅಂಗಡಿಯಿಂದ ಮೋಸ ಆಗಿದ್ದು ಯುವಕ ಎಫ್ಐಆರ್ ದಾಖಲಿಸಿದ್ದಾನೆ.
ಬೆಂಗಳೂರಿನ ನಾಗೇಂದ್ರ ಬ್ಲಾಕ್ ಬಳಿ ಇರುವ ಮಾರಮ್ಮ ಪೇಪರ್ ಮಾರ್ಟ್ಗೆ ಜೀವನ್ 8 ಕೆಜಿ ಪೇಪರ್ ಕೊಂಡೊಯ್ದಿದ್ದ. 1 ಕೆಜಿಗೆ 16 ರೂಪಾಯಿ ತೂಗುತ್ತೆ. ಪೇಪರ್ ಸ್ಕೇಲ್ನಲ್ಲಿ 8 ಕೆಜಿಯಷ್ಟು ಪೇಪರ್ ಕೇವಲ 6 ಕೆ.ಜಿ 900 ಗ್ರಾಂ ಎಂದು ತೋರಿಸಿದೆ. ಅದೇ ಬಂಡಲನ್ನು ಮನೆಯ ಬಳಿಯ ಅಂಗಡಿಯೊಂದರಲ್ಲಿ ತೂಕ ಮಾಡಿದಾಗ 8 ಕೆ.ಜಿ 700 ಗ್ರಾಂ ಇತ್ತು. ಬಳಿಕ ಜೀವನ್ಗೆ ಇಲ್ಲಿ ಮೋಸ ಆಗುತ್ತಿರುವುದು ಗೊತ್ತಾಗಿದೆ.
ಬಳಿಕ ಮಾರಮ್ಮ ಪೇಪರ್ ಮಾರ್ಟ್ಗೆ ಹೋದ ಜೀವನ್ ಮತ್ತೆ ತೂಕ ಮಾಡಿಸಿದ್ದಾರೆ. ಆಗ ಅಲ್ಲಿ ಕೆಳ ಭಾಗದಲ್ಲಿ ಮಾತ್ರ ತೂಕ ಮೇಲ್ಭಾಗದಲ್ಲಿ 6ಕೆ.ಜಿ 900 ಗ್ರಾಂ ಬರುತ್ತಿತ್ತು. ಇದನ್ನ ಪ್ರಶ್ನಿಸಿದಕ್ಕೆ, ಇಷ್ಟವಿದ್ದರೆ ಮಾರು ಇಲ್ಲ ಈ ವಿಚಾರ ಯಾರಿಗೂ ಹೇಳಬೇಡ, ಹೇಳಿದರೆ ಗ್ರಹಚಾರ ನೆಟ್ಟಗಿರುವುದಿಲ್ಲ ಎಂದು ಗುಜರಿ ಅಂಗಡಿಯಲ್ಲಿದ್ದವ ಬೆದರಿಕೆ ಹಾಕಿದ್ದಾನೆ.
ಈ ಹಿನ್ನಲೆ ಗಿರಿನಗರ ಪೊಲೀಸ್ ಠಾಣೆಯಲ್ಲಿ ಜೀವನ್ ದೂರು ದಾಖಲಿಸಿದ್ದಾರೆ. ದೂರಿನನ್ವಯ Legal metrology act ನಡಿ ಗಿರಿನಗರ ಪೊಲೀಸರು ಕೇಸ್ ದಾಖಲಿಸಿದ್ದಾರೆ.