- Advertisement -
- Advertisement -



ವಿಟ್ಲ: ಲಯನ್ಸ್ ಕ್ಲಬ್ ವಿಟ್ಲ ಸಿಟಿ ಇದರ ವತಿಯಿಂದ ಎಸ್ಎಲ್ ವಿ ಬುಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಇವರ ಸಹಕಾರದಲ್ಲಿ ದಕ್ಷಿಣ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಅನಿಲ ಕಟ್ಟೆ ಶಾಲಾ ಒಂದರಿಂದ ಏಳನೇ ತರಗತಿ ವಿದ್ಯಾರ್ಥಿಗಳಿಗೆ ಬರೆಯುವ ಪುಸ್ತಕಗಳನ್ನು ಅಧ್ಯಕ್ಷ ವಸಂತ ಶೆಟ್ಟಿ ಎರ್ಮಿ ನೆಲೆ, ಅಧ್ಯಕ್ಷತೆಯಲ್ಲಿ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಲಯನ್ಸ್ ಪ್ರಾಂತೀಯ 3ರ ವಲಯ ಅಧ್ಯಕ್ಷ ಸಂದೇಶ್ ಶೆಟ್ಟಿ ಬಿಕ್ನಾಜೆ, ಉಪಾಧ್ಯಕ್ಷ ಎ ಕೃಷ್ಣ, ಮೋಹನ್ ಕಟ್ಟೆ, ಸಕ್ರಿಯ ಸದಸ್ಯ ಮತ್ತು ಅದೇ ಶಾಲೆಯ ಹಳೆ ವಿದ್ಯಾರ್ಥಿಗಳಾದ ಧರ್ಣಪ ಗೌಡ ಬನ, ರಾಘವ ಗೌಡ ಬನ , ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ನವೀನ ಗೌಡ ಪೂರ್ಲ ಪಾಡಿ, ಹಾಗೂ ಎಸ್ ಡಿ ಎಂ ಸಿ ಉಪಾಧ್ಯಕ್ಷರ ಹಾಗೂ ಇನ್ನಿತರ ಸದಸ್ಯರು, ಹಾಗೂ ಮುಖ್ಯ ಉಪಾಧ್ಯಾಯನಿ ಮತ್ತು ಇತರ ಶಿಕ್ಷಕ ವೃಂದ ಉಪಸ್ಥಿತರಿದ್ದರು.
ಶಾಲೆಯ ಹಳೆ ವಿದ್ಯಾರ್ಥಿ ಹಾಗೂ ಲಯನ್ಸ್ ಕ್ಲಬ್ ಸದಸ್ಯ ಶ್ರೀ ರಾಘವ ಗೌಡ ಬನ ಶಾಲೆಯ ಹಾಗೂ ನೆರೆದ ಎಲ್ಲಾ ಜನರಿಗೆ ಸಿಹಿ ತಿಂಡಿ ವಿತರಿಸಿದರು.
- Advertisement -