Sunday, May 19, 2024
spot_imgspot_img
spot_imgspot_img

2 ವರ್ಷಗಳ ಹಿಂದೆ ನಡೆದ ಕಳವು ಪ್ರಕರಣದ ಐವರು ಆರೋಪಿಗಳ ಬಂಧನ

- Advertisement -G L Acharya panikkar
- Advertisement -

ಮಡಿಕೇರಿಯಲ್ಲಿ ನಡೆದ ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ವರ್ಷಗಳ ನಂತರ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಕೊಡಗು ಪೊಲೀಸರು ಯಶಸ್ವಿಯಾಗಿದ್ದಾರೆ.

2022ರ ಜೂ. 8ರಂದು ಸಿದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಚನ್ನಂಗಿ ನಿವಾಸಿ ತಂಗಪ್ಪನ್ ಕೆ.ಕೆ ಅವರ ಮನೆಗೆ ಮುಸುಕುಧಾರಿಗಳು ನುಗ್ಗಿ ತಂಗಪ್ಪನ್ ಹಾಗೂ ಪತ್ನಿಯ ಮೇಲೆ ಹಲ್ಲೆ ಮಾಡಿ 2 ಲಕ್ಷ ರೂ. ಹಾಗೂ 8 ಗ್ರಾಂ ತೂಕದ ಚಿನ್ನದ ಸರವನ್ನು ಕದ್ದೊಯ್ದಿದ್ದರು. ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆ ಕೈಗೊಂಡ ಪೊಲೀಸರು ಚನ್ನಂಗಿ ನಿವಾಸಿ ಲವಕುಮಾರ್ ಎಂ.ಕೆ (51), ಅತ್ತೂರಿನ ವಿನೋದ್ ಎಚ್.ಸಿ. (45), ವೀರಾಜಪೇಟೆಯ ಅಯ್ಯಪ್ಪ ಬೆಟ್ಟ ಸಮೀಪದ ಅನೀಶ್ ಪಿ.ಎಸ್. (33), ಅತ್ತೂರಿನ ಪ್ರವೀಣ್ ಕುಮಾರ್ (46) ಹಾಗೂ ಭದ್ರಗೊಳದ ರಫೀಕ್ ಕೆ.ಈ. (45) ಅವರನ್ನು ಬಂಧಿಸಿದ್ದಾರೆ.
ಬಂಧಿತರಿಂದ 60 ಸಾವಿರ ರೂ. ನಗದು, 7.9 ಗ್ರಾಂ ಚಿನ್ನದ ಸರ, ಕೃತ್ಯಕ್ಕೆ ಬಳಸಿದ ಕಾರು ಹಾಗೂ ಕಳ್ಳತನದ ಹಣದಿಂದ ಖರೀದಿಸಿದ ಮತ್ತೊಂದು ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

- Advertisement -

Related news

error: Content is protected !!