ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸರಿಗೆ ಅಭಿನಂದನೆ ಮತ್ತು ಸಂತ್ರಸ್ತೆಗೆ ಸಾಂತ್ವನ ಹಾಗೂ ಭರವಸೆ ನೀಡಿದ ಬಿಜೆಪಿ ನಾಯಕಿ ಆಶಾ ತಿಮ್ಮಪ್ಪ ಗೌಡ
ಬಿಜೆಪಿ ಕಾರ್ಯಕರ್ತರಿಗೆ ಸಂತ್ರಸ್ತೆ ಯುವತಿ ಹಾಗೂ ಕುಟುಂಬಸ್ಥರಿಂದ ಧನ್ಯವಾದ
ವಿಟ್ಲ: ಮುಸ್ಲಿಂ ಯುವಕನೋರ್ವ ಹಿಂದೂ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಘಟನೆ ವಿಟ್ಲದ ಕಡಂಬು ಸಮೀಪದ ಅನಿಲಕಟ್ಟೆ ಎಂಬಲ್ಲಿ ನಡೆದಿದ್ದು ಈ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಕನ್ಯಾನದ ಅಬೂಬಕ್ಕರ್( 46) ಎಂಬಾತನನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸರಿಗೆ ಬಿಜೆಪಿ ನಾಯಕಿ ಆಶಾ ತಿಮ್ಮಪ್ಪ ಗೌಡ ಅಭಿನಂದನೆ ಸಲ್ಲಿಸಿದ್ದಾರೆ.
ಸಂತ್ರಸ್ಥೆ ಯುವತಿಗೆ ಬಿಜೆಪಿ ನಾಯಕಿ ಆಶಾ ತಿಮ್ಮಪ್ಪ ಗೌಡ ಸಾಂತ್ವನ ಹಾಗೂ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಯುವತಿ ಹಾಗೂ ಕುಟುಂಬಸ್ಥರು ಬಿಜೆಪಿ ಕಾರ್ಯಕರ್ತರಿಗೆ ಧನ್ಯವಾದ ತಿಳಿಸಿದ್ದಾರೆ.
ಶೀಘ್ರವೇ ಬಂಧಿಸುವಂತೆ ಆಶಾ ತಿಮ್ಮಪ್ಪ ಗೌಡ ಆಗ್ರಹ:
ಘಟನೆ ಆಗುತ್ತಿದ್ದಂತೆ ಈ ಪ್ರಕರಣ ಪೊಲೀಸ್ ಮೆಟ್ಟಿಲೇರಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ಬಿಜೆಪಿ ನಾಯಕಿ ಆಶಾ ತಿಮ್ಮಪ್ಪ ಗೌಡ ಅವರು ಸಂತ್ರಸ್ತೆಯ ಮನೆಗೆ ಭೇಟಿ ನೀಡಿ ಮಾಹಿತಿ ಕಲೆಹಾಕಿದರು. ನಂತರ ಸಂತ್ರಸ್ತೆ ಹಾಗೂ ಕುಟುಂಬಸ್ಥರಿಗೆ ಧೈರ್ಯ ತುಂಬಿದರು. ಪೊಲೀಸ್ ಠಾಣೆಗೆ ಆಗಮಿಸಿದ ಆಶಾ ತಿಮ್ಮಪ್ಪ ಆರೋಪಿಯನ್ನು ಶೀಘ್ರವೇ ಬಂಧಿಸುವಂತೆ ಆಗ್ರಹಿಸಿದರು.
ಯುವತಿಗೆ ಉದ್ಯೋಗ ನೀಡುವ ಭರವಸೆ
ಕುಟುಂಬಸ್ಥರೊಂದಿಗೆ ಮಾತುಕತೆ ನಡೆಸಿದ ಆಶಾ ತಿಮ್ಮಪ್ಪ ಗೌಡ ಅವರು ಯುವತಿಗೆ ಉದ್ಯೋಗ, ಮನೆ ರಿಪೇರಿ, ಆರ್ಥಿಕ ನೆರವು ನೀಡುತ್ತೇನೆ ಎಂದು ಭರವಸೆ ನೀಡಿದರು. ಸ್ಥಳೀಯ ಜನಪ್ರತಿನಿಧಿ, ಬಿಜೆಪಿ ಕಾರ್ಯಕರ್ತರು ಧೈರ್ಯ ತುಂಬಿದರು.
ಕಷ್ಟದ ಸಮಯದಲ್ಲಿ ಜೊತೆ ನಿಂತ ಆಶಾ ತಿಮ್ಮಪ್ಪ ಗೌಡ, ಮತ್ತು ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಬಿಜೆಪಿ ಕಾರ್ಯಕರ್ತರು, ಆರೋಪಿಯನ್ನು ಬಂಧಿಸಿದ ವಿಟ್ಲ ಪೊಲೀಸರಿಗೆ ಯುವತಿ ಹಾಗೂ ಮನೆಯವರು ಧನ್ಯವಾದ ತಿಳಿಸಿದ್ದಾರೆ.
ಇನ್ನು ಇದೇ ವೇಳೆ ಯುವತಿಗೆ ನ್ಯಾಯ ಒದಗಿಸುವಂತೆ ಹಿಂದೂ ಸಂಘಟನೆಯ ಪ್ರಮುಖರು ಆಗ್ರಹ ವ್ಯಕ್ತಪಡಿಸಿದ್ದರು. ಸಂತ್ರಸ್ಥೆಯ ಮನೆಗೆ ಭೇಟಿ ನೀಡಿ ಧೈರ್ಯ ತುಂಬುವ ಕೆಲಸ ಮಾಡಿದ್ದರು.