- Advertisement -
- Advertisement -
ಲಾಕ್ಡೌನ್ನಿಂದಾಗಿ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ದುಡಿಮೆಯಿಲ್ಲದೆ ಜನರು ಆರ್ಥಿಕ ಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಹಲವಾರು ಮಂದಿ ಬಡವರ, ಸಂಕಷ್ಟಕ್ಕೆ ಸಿಲುಕಿದ ಮಂದಿಗೆ ಸಹಾಯ ಹಸ್ತ ಚಾಚುತ್ತಿದ್ದಾರೆ. ಅಂತೆಯೇ ಕೋಡಿಂಬಾಡಿ ಅಶೋಕ್ ರೈ ಕೂಡ ಸಹಾಯ ಹಸ್ತ ಚಾಚಿದ್ದಾರೆ.
ನಿನ್ನೆಯಷ್ಟೇ ನೂರಾರು ಸಂಖ್ಯೆಯಲ್ಲಿ ವಿಟ್ಲದ ಆಟೋ ಚಾಲಕರಿಗೆ ದಿನಬಳಕೆ ವಸ್ತುಗಳನ್ನು ವಿತರಣೆ ನಡೆಸಿದ್ದಾರೆ. ಇಂದು ಸಹ ವಿಟ್ಲದ ಪಂ ಚಲಿಂಗೇಶ್ವರ ದೇವಾಲಯದ ಆವರಣದಲ್ಲಿ ಆಟೋ ಚಾಲಕರಿಗೆ ಹಾಗೂ ಬಡವರಿಗೆ ಅಕ್ಕಿ, ಆಹಾರದ ಅತ್ಯಗತ್ಯಗಳ ಕಿಟ್ ವಿತರಣೆ ನಡೆಸಿದ್ದಾರೆ.
- Advertisement -