ಅಪ್ರಾಪ್ತ ಯುವಕರಿಬ್ಬರಿಂದ ಅಪ್ರಾಪ್ತ ಬಾಲಕಿಯ ಕತ್ತು ಸೀಳಿ ಕೊಲೆಗೆ ಯತ್ನಿಸಿದ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ.
ಯುವಕ ಚನ್ನವೀರ, ಮತ್ತೋರ್ವ ಆತನ ಸ್ನೇಹಿತ ಎಂದು ಗುರುತಿಸಲಾಗಿದೆ.
ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ಯುವಕರಿಬ್ಬರು ಬೈಕ್ನಲ್ಲಿ ಹಿಂಬಾಲಿಸಿಕೊಂಡು ಬಂದಿದ್ದರು. ಚಲಿಸುತ್ತಿದ್ದ ಬಸ್ ಓವರಟೇಕ್ ಮಾಡಿ ಬೈಕ್ನಲ್ಲೇ ಬಸ್ ಅಡ್ಡ ಹಾಕಿದ ಯುವಕರು ಬಸ್ ಹತ್ತಿದ್ದಾರೆ. ನೇರವಾಗಿ ಬಾಲಕಿ ಕುಳಿತಿದ್ದ ಸೀಟ್ ಬಳಿಕ ಹೋಗಿ ಚಾಕುವಿನಿಂದ ಆಕೆಯ ಕತ್ತನ್ನು ಕತ್ತರಿಸಿ ಬಸ್ ಇಳಿದು ಪರಾರಿಯಾಗಿದ್ದಾರೆ.
ಘಟನೆ ಕಂಡು ಬಸ್ ಪ್ರಯಾಣಿಕರೂ ಬೆಚ್ಚಿ ಬಿದ್ದಿದ್ದಾರೆ. ಕಲಬುರಗಿಯ ಬೆಳಮಗಿ ಗ್ರಾಮದಿಂದ ವಿಕೆ ಸಲಗರದ ಗ್ರಾಮಕ್ಕೆ ಬಾಲಕಿ ಬಸ್ನಲ್ಲಿ ಪ್ರಯಾಣ ಮಾಡುತ್ತಿದ್ದಳು. ಅಟ್ಟೂರು ಕ್ರಾಸ್ ಎಂಬಲ್ಲಿ ಬಸ್ ಬಂದ ವೇಳೆ ಬೈಕ್ನಲ್ಲಿ ಬಂದ ಯುವಕರು ಬಸ್ ಅಡ್ಡಗಟ್ಟಿದ್ದರು. ಸದ್ಯ ಗಂಭೀರ ಗಾಯಗೊಂಡ ಯುವತಿ ಕಲುಬುರಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಪ್ರೇಮ ನಿರಾಕರಣೆಯೇ ಇಂತಹ ಒಂದು ಕೃತ್ಯಕ್ಕೆ ಕಾರಣವಾಗಿರಬಹುದು ಎಂದು ಅಂದಾಜಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ನರೋಣ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.