- Advertisement -
- Advertisement -
ವಿಟ್ಲ: ವಿಟ್ಲ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಅಯೋಧ್ಯಾ ಶ್ರೀ ರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನ ಸಂಕಲ್ಪ ಕಾರ್ಯಕ್ರಮವು ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.
ಮಾಣಿಲ ಕ್ಷೇತ್ರ ಶ್ರೀದಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಸಂಕಲ್ಪದೊಂದಿಗೆ ಆಶೀರ್ವಚನ ನೀಡಿದರು.
ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸತ್ಸಂಘ ಪ್ರಮುಖ್ ಕರ್ನಾಟಕ ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್ ‘ಸಂಕಲ್ಪ ನುಡಿ’ ನುಡಿದರು. ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಹಕಾರ್ಯದರ್ಶಿ ಅಭಿಯಾನದ ತಾಲೂಕು ಸಂಯೋಜಕ ಇಡ್ಯಾಳ ಗೋವರ್ಧನ ಕುಮಾರ್ ವೇದಿಕೆಯಲ್ಲಿದ್ದರು.
ವೈಷ್ಣವಿ ಅಡಿಗಾ ವೈಯಕ್ತಿಕ ಗೀತೆ, ವಿ ಹೆಚ್ ಪಿ ವಿಟ್ಲ ನಗರ ಅಧ್ಯಕ್ಷ ವಿಶ್ವನಾಥ ಗೌಡ ನಾಯ್ತೊಟ್ಟು ಸ್ವಾಗತ ಮತ್ತು ಹರೀಶ್ ಇವರಿಂದ ನಿರೂಪಣೆ ಹಾಗೂ ಧನ್ಯವಾದ ಕಾರ್ಯಕ್ರಮ ನಡೆಯಿತು.
- Advertisement -