Saturday, April 27, 2024
spot_imgspot_img
spot_imgspot_img

ಮಂಗಳೂರನ್ನೇ ತಲ್ಲಣಗೊಳಿಸಿದ್ದ ಒಂಟಿ ಮಹಿಳೆಯ ಅತ್ಯಾಚಾರ ಕೊಲೆ ಪ್ರಕರಣ-ಕಾಸರಗೋಡು ನಿವಾಸಿ ಆಶ್ರಫ್ ಬಂಧನ

- Advertisement -G L Acharya panikkar
- Advertisement -

ಮಂಗಳೂರು(ಅ. 22): ಕಳೆದ ತಿಂಗಳು ಇಡಿ ಮಂಗಳೂರನ್ನೇ ತಲ್ಲಣಗೊಳಿಸಿದ್ದ ಒಂಟಿ ಮಹಿಳೆಯ ಅತ್ಯಾಚಾರ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೇರಳದ ಕಾಸರಗೋಡು ನಿವಾಸಿ ಕೂಲಿಯಾಳು 30 ವರ್ಷದ ಆರೋಪಿ ಆಶ್ರಫ್ ಎಂಬಾತನನ್ನು ಬಂಧಿಸಿದ್ದಾರೆ. ಬಾಳೆಪುಣಿ ಗ್ರಾಮದ ಅವಿವಾಹಿತ ಒಂಟಿ ಮಹಿಳೆಯ ಮನೆಯಿಂದ ಈತ ಕಳುವು ಮಾಡಿದ್ದೂ ಅಲ್ಲದೆ ಆಕೆಯ ಮಾನ ದೋಚಿ ಕೊಲೆಯನ್ನೂ ಮಾಡಿ ಹೋಗಿದ್ದ.


ಸೆಪ್ಟೆಂಬರ್ 24. ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಬಾಳೆಪುಣಿ ಗ್ರಾಮದಲ್ಲಿ ವಾಸವಿದ್ದ 53 ವರ್ಷದ ಒಂಟಿ ಮಹಿಳೆ ಕುಸುಮಾ ತನ್ನ ಮನೆಯಲ್ಲಿ ನಗ್ನಸ್ಥಿತಿಯಲ್ಲಿ ಸತ್ತು ಬಿದ್ದಿದ್ದಳು. ಮದುವೆಯಾಗದೇ ಒಬ್ಬೊಂಟಿಯಾಗಿ ವಾಸವಿದ್ದರು. ಇವರನ್ನು ನೋಡಲು ಬಂದ ಗ್ರಾಮದ ಓರ್ವರಿಂದ ಇವರು ಕೊಲೆಯಾಗಿರುವ ವಿಚಾರ ಗೊತ್ತಾಗಿದೆ. ಅವರು ಪೊಲೀಸರಿಗೆ ವಿಚಾರ ತಿಳಿಸುತ್ತಾರೆ. ತ​ಕ್ಷಣ ಸ್ಥಳಕ್ಕೆ ಕೊಣಾಜೆ ಪೊಲೀಸರು ಆಗಿಮಿಸಿ ಸ್ಥಳ ಪರಿಶೀಲನೆ ಮಾಡುತ್ತಾರೆ.

ಅಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಆ ಕೊಲೆ ನಡೆದು ಹೋಗಿರುತ್ತದೆ. ಅಷ್ಟಕ್ಕೂ ಕೊಲೆ ಮಾಡಿದ ವ್ಯಕ್ತಿ ಆ ಮಹಿಳೆಯ ಓಲೆಗಳು ಮತ್ತು ಮನೆಯಲ್ಲಿದ್ದ ನಗದನ್ನು ಕದ್ದು ಪರಾರಿಯಾಗಿರುತ್ತಾನೆ. ಇನ್ನು ಪೊಲೀಸರು ಮೃತ ಮಹಿಳೆ ಕುಸುಮಾರ ಮೃತದೇಹವನ್ನು ಪೋಸ್ಟ್ ಮಾರ್ಟ್ಂಗೆ ಕಳಿಹಿಸುತ್ತಾರೆ. ಆಗ ಒಂದು ಆಘಾತಕಾರಿ ವಿಚಾರ ಹೊರ ಬಂದಿತ್ತು. ಆದು ಕುಸುಮಾಳನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಅನ್ನೊದು ಗೊತ್ತಾಗುತ್ತದೆ. ಎಸಿಪಿ ರಂಜಿತ್ ಕುಮಾರ್ ನೇತೃತ್ವದಲ್ಲಿ ತಂಡವನ್ನ ರಚಿಸಿ ತನಿಖೆ ನಡೆಸಲಾಗುತ್ತದೆ ಹಾಗೂ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗುತ್ತಾರೆ.

- Advertisement -

Related news

error: Content is protected !!