Saturday, April 27, 2024
spot_imgspot_img
spot_imgspot_img

ಪತ್ನಿಯೇ ಪತಿಯ ಕುತ್ತಿಗೆಗೆ ಕಾಲಿಟ್ಟು ಹತ್ಯೆ!

- Advertisement -G L Acharya panikkar
- Advertisement -

ಬೆಂಗಳೂರು: ಪತ್ನಿಯೇ ಪತಿಯ ಕುತ್ತಿಗೆ ಮೇಲೆ ಕಾಲಿಟ್ಟು ಹತ್ಯೆಗೈದಿರುವ ಘಟನೆ ಜೆ.ಜೆ. ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಓಬಳೇಶ್‌ ಕಾಲೋನಿ ನಿವಾಸಿ ಮೋಹನ್‌ (41) ಮೃತರು. ಪತ್ನಿ ಪದ್ಮಾ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ಮೋಹನ್‌ ಮತ್ತು ಪದ್ಮಾ ಬಿಬಿಎಂಪಿ ಪೌರ ಕಾರ್ಮಿಕರಾಗಿದ್ದು, ಮೋಹನ್‌ ಕಸದ ಆಟೋ ಚಾಲಕನಾಗಿದ್ದಾನೆ. 2004ರಲ್ಲಿ ಮೋಹನ್‌, ಪದ್ಮಾ ಮದುವೆಯಾಗಿದ್ದು, ದಂಪತಿಗೆ ಮೂವರು ಗಂಡು ಮಕ್ಕಳಿದ್ದಾರೆ. ಮೋಹನ್‌ಗೆ ಮದ್ಯ ಸೇವನೆ ಚಟವಿತ್ತು. ಜತೆಗೆ ಇತ್ತೀಚೆಗೆ ಆನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ಆರು ತಿಂಗಳ ಹಿಂದೆ ಕುಡಿತದ ಚಟ ಬಿಡಿಸುವ ಪುರ್ನವಸತಿ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಅಲ್ಲಿಂದ ಬಂದ ಕೆಲ ದಿನಗಳ ಕಾಲ ಮೋಹನ್‌ ಮದ್ಯದಿಂದ ದೂರವಿದ್ದರು. ಅನಂತರ ಮತ್ತೆ ಕುಡಿಯಲು ಆರಂಭಿಸಿದ್ದರು. ಅದೇ ವಿಚಾರಕ್ಕೆ ದಂಪತಿ ನಡುವೆ ಗಲಾಟೆಯಾಗಿದೆ.

ಮದ್ಯದ ವಿಚಾರಕ್ಕೆ ಜಗಳ, ಕೊಲೆ ಭಾನುವಾರ ಮಧ್ಯಾಹ್ನ ಮೋಹನ್‌ ಕಂಠಪೂರ್ತಿ ಮದ್ಯ ಸೇವಿಸಿ ಮನೆಗೆ ಬಂದು, ಪತ್ನಿ ಜತೆ ಜಗಳವಾಡಿದ್ದಾನೆ. ಈ ವೇಳೆ ಕುಡಿಯಲು ಹಣ ಕೊಡುವಂತೆ ಪತ್ನಿಗೆ ಒತ್ತಾಯಿಸಿದ್ದರು. ಅದರಿಂದ ಆಕ್ರೋಶಗೊಂಡ ಪತ್ನಿ ಹಣ ಕೊಡುವುದಿಲ್ಲ. ಎಳನೀರು ತರುವಂತೆ ಪತಿಗೆ ಹೇಳಿದ್ದಾರೆ. ಆಗ ಮತ್ತೊಮ್ಮೆ ಇಬ್ಬರ ನಡುವೆ ಜಗಳ ನಡೆದಿತ್ತು.

ayo

ಅನಂತರ ಮಧ್ಯಾಹ್ನ 3.15ರ ಸುಮಾರಿಗೆ ಮತ್ತೆ ಮೋಹನ್‌ ಪತ್ನಿ ಜತೆ ಅದೇ ವಿಚಾರವಾಗಿ ಜಗಳವಾಡಿದ್ದು, ಹಲ್ಲೆ ನಡೆಸಲು ಬಂದ ಪತಿಯನ್ನು ಪದ್ಮಾ ಪಕ್ಕಕ್ಕೆ ತಳ್ಳಿದ್ದಾಳೆ. ಈ ವೇಳೆ ಕೆಳಗೆ ಬಿದ್ದ ಮೋಹನ್‌ ಕುತ್ತಿಗೆ ಮೇಲೆ ಕಾಲಿಟ್ಟು ತುಳಿದಿದ್ದಾರೆ. ಆಗ ಅಸ್ವಸ್ಥಗೊಂಡ ಮೋಹನ್‌ನನ್ನು ಆಕೆಯೇ ಸ್ಥಳೀಯರ ನೆರವಿನೊಂದಿಗೆ ಸಮೀಪದ ಆಸ್ಪತ್ರೆಗೆ ಕರೆದೊಯ್ದು, ಹೆಚ್ಚಿನ ಚಿಕಿತ್ಸೆಗಾಗಿ ಕಿಮ್ಸ್‌ಗೆ ದಾಖಲಿಸಿದರೂ ಚಿಕಿತ್ಸೆ ಫ‌ಲಕಾರಿಯಾಗದೆ ಮೃತಪಟ್ಟಿದ್ದಾರೆ.

ಸೋಮವಾರ ಮುಂಜಾನೆ ನಾಲ್ಕು ಗಂಟೆ ಸುಮಾರಿಗೆ ಸಂಬಂಧಿಕರೊಬ್ಬರು ದೂರು ನೀಡಿದ್ದು, ಜೆ.ಜೆ. ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಳಿಕ ಪದ್ಮಾ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ತಿಳಿದಿದೆ.

- Advertisement -

Related news

error: Content is protected !!