Monday, April 29, 2024
spot_imgspot_img
spot_imgspot_img

ಬಂಟ್ವಾಳ :ನಿಶ್ಚಿತಾರ್ಥಕ್ಕಾಗಿ ಗೆಳತಿಯಿಂದ ಚಿನ್ನಾಭರಣ ಪಡೆದು ವಂಚನೆ ಆರೋಪ: ಪ್ರಕರಣ ದಾಖಲು..!

- Advertisement -G L Acharya panikkar
- Advertisement -

ಬಂಟ್ವಾಳ : ನಿಶ್ಚಿತಾರ್ಥಕ್ಕಾಗಿ ಚಿನ್ನಾಭರಣ ಕೇಳಿ ವಾಪಸ್ಸು ಹಿಂತಿರುಗಿಸದೇ ಆಕೆಯ ಸ್ನೇಹಿತೆಗೆ ವಂಚಿಸಿದ ಘಟನೆ ಬಂಟ್ವಾಳ ಬಿ ಮೂಡ ಗ್ರಾಮದಲ್ಲಿ ನಡೆದಿದೆ.

ಆರೋಪಿಗಳನ್ನು ಅಶ್ಚಿನಿ ಹಾಗೂ ಶ್ರೀಕಾಂತ್ ಎಂದು ಗುರುತಿಸಲಾಗಿದೆ.

ಬಂಟ್ವಾಳ ನಿವಾಸಿ ಸಂದ್ಯಾ ವಿದೇಶಕ್ಕೆ ತೆರಳುವ ವೇಳೆ ಮಂಗಳೂರು ಏರ್ ಪೋರ್ಟ್ ನಲ್ಲಿದ್ದಾಗ, ಆಕೆಯ ಸ್ನೇಹಿತೆ ಅಶ್ಚಿನಿ ತನ್ನ ನಿಶ್ಚಿತಾರ್ಥಕ್ಕಾಗಿ ಚಿನ್ನಾಭರಣಗಳನ್ನು ನೀಡುವಂತೆ ವಿನಂತಿಸಿಕೊರುತ್ತಾರೆ. ಸಂದ್ಯಾ ತನ್ನ ತಾಯಿಯ ಬಳಿ ಹೇಳಿ ಚಿನ್ನಾಭರಣಗಳನ್ನು ಕೊಡುವಂತೆ ತಿಳಿಸಿ ವಿದೇಶಕ್ಕೆ ತೆರಳಿರುತ್ತಾರೆ. ಅದರಂತೆ ಅವರ ತಾಯಿ ಅಶ್ಚಿನಿ ರವರಿಗೆ ಸುಮಾರು 32.70 ಗ್ರಾಂ ತೂಕದ ಚಿನ್ನದ ನೆಕ್ಲೆಸ್ -1, ಸುಮಾರು 15.100 ಗ್ರಾಂ ತೂಕದ ಚಿನ್ನದ ಕೈ ಬಳೆ, -1, ಸುಮಾರು 2.200 ಗ್ರಾಂ ತೂಕದ ವಜ್ರದ ಕಿವಿಯೊಲೆ -1 ಜೊತೆಗೆ ಸುಮಾರು 17.200 ಗ್ರಾಂ ತೂಕದ ಚಿನ್ನದ ಕೈ ಬಳೆ-1 , ಸುಮಾರು 8 ಗ್ರಾಂ ತೂಕದ ಚಿನ್ನದ ಬಳೆ-1 , ಸುಮಾರು 8 ಗ್ರಾಂ ತೂಕದ ಚಿನ್ನದ ಪೆಂಡೆಂಟ್-1, ಸುಮಾರು 8 ಗ್ರಾಂ ತೂಕದ ಚಿನ್ನದ ರಿಂಗ್ -1, 8.19 ಗ್ರಾಂ ತೂಕದ ಚಿನ್ನದ ಸರ -1 ನೀಡಿರುತ್ತಾರೆ.

ಕೆಲ ಸಮಯದ ಬಳಿಕ ಚಿನ್ನಾಭರಣಗಳನ್ನು ಹಿಂತಿರುಗಿಸುವಂತೆ ಅಶ್ಚಿನಿ ಹಾಗೂ ಶ್ರೀಕಾಂತ್ ಎಂಬವರನ್ನು ಕೇಳಿಕೊಂಡಾಗ ಹಿಂತಿರುಗಿಸದೇ ವಂಚಿಸಿರುತ್ತಾರೆ. ಬಳಿಕ 17.200 ಗ್ರಾಂ ತೂಕದ ಚಿನ್ನದ ಕೈ ಬಳೆ-1, 8 ಗ್ರಾಂ ತೂಕದ ಚಿನ್ನದ ಪೆಂಡೆಂಟ್-1,
ಸುಮಾರು 8 ಗ್ರಾಂ ತೂಕದ ಚಿನ್ನದ ರಿಂಗ್ -1 ಹಿಂತಿರುಗಿಸಿದ್ದು ಉಳಿದ ಚಿನ್ನವನ್ನುಉಳಿದ ಚಿನ್ನಾಭರಣಗಳನ್ನು ಈವರೆಗೆ ಹಿಂತಿರುಗಿಸದೇ ವಂಚಿಸಿದ್ದಾರೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!