Tuesday, July 1, 2025
spot_imgspot_img
spot_imgspot_img

*ಬಂಟ್ವಾಳ; ಸೊಸೈಟಿಗೆ ಹೋಗಿ ಬರುವುದಾಗಿ ಹೇಳಿದ ಯುವತಿ ನಾಪತ್ತೆ !*

- Advertisement -
- Advertisement -

ಬಂಟ್ವಾಳ: ಸೊಸೈಟಿಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ತೆರಳಿದ ಯುವತಿಯೋರ್ವಳು ನಾಪತ್ತೆಯಾಗಿರುವ ಘಟನೆ ಕುಕ್ಕಿಪಾಡಿ ಗ್ರಾಮದ ಕೆಂತಾಳೆಯಲ್ಲಿ ಡಿ.೩ರಂದು ಸಂಭವಿಸಿದೆ. ಇಲ್ಲಿನ ದಿ. ಬಾಬು ಪೂಜಾರಿ ಅವರ ಪುತ್ರಿ ಪವಿತ್ರ(೨೪) ನಾಪತ್ತೆಯಾಗಿರುವಾಕೆ.

ಪವಿತ್ರ ಬೆಳಗ್ಗೆ ವಾಮದಪದವು ಸೊಸೈಟಿಯಲ್ಲಿ ಗ್ರೂಪ್‌ನಲ್ಲಿ ಜಮಾ ಮಾಡಿದ್ದ ಹಣದ ವಿಚಾರ ಮಾತನಾಡಿ ಬರುತ್ತೇನೆ ಎಂದು ತೆರಳಿದವಳು  ವಾಪಾಸು ಮನೆಗೆ ಬಾರದೇ, ಸಂಬಂಽಕರ ಮನೆಗೂ ಹೋಗದೇ ಕಾಣೆಯಾಗಿರುತ್ತಾಳೆ ಎಂದು ಆಕೆಯ ತಾಯಿ ಭಾರತಿ ಅವರು ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!