- Advertisement -
- Advertisement -
ಬಂಟ್ವಾಳ: ಕಲ್ಲಿನ ಕೋರೆಯಲ್ಲಿ ಶೇಖರವಾಗಿದ್ದ ನೀರಿನಲ್ಲಿ ಆಟವಾಡಲು ಹೋದ ಬಾಲಕ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಶನಿವಾರ ಸಂಜೆ ಬಂಟ್ವಾಳ ತಾಲೂಕಿನ ಬಾರೆಕಾಡ್ ಎಂಬಲ್ಲಿ ನಡೆದಿದೆ.
ಮೃತ ಬಾಲಕ ಬಂಟ್ವಾಳ ಕಸ್ಟಾಗ್ರಾಮದ ಬಾರೆಕಾಡ್ ಕ್ವಾಟ್ರಸ್ ನಿವಾಸಿ ಮುಹಮ್ಮದ್ ಸಾದಿಕ್ ಅವರ ಪುತ್ರ ಮುಹಮ್ಮದ್ ಸೌಹಾದ್ (11) ಎನ್ನಲಾಗಿದೆ.
ಇಬ್ಬರು ಸ್ನೇಹಿತರ ಜೊತೆ ನೀರಾಟವಾಡಲು ಕಲ್ಲಿನ ಕೋರೆಯಲ್ಲಿ ಶೇಖರವಾಗಿದ್ದ ನೀರಿನಲ್ಲಿ ಆಟವಾಡಲು ಹೋಗಿದ್ದ ಸೌಹಾದ್ ಆಯತಪ್ಪಿ ನೀರಿಗೆ ಬಿದ್ದಿದ್ದಾನೆ. ಕೂಡಲೇ ಆತನ ಸ್ನೇಹಿತರು ಸ್ಥಳೀಯರಿಗೆ ಮಾಹಿತಿ ನೀಡಿದ್ದು,ಬಾಲಕನನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಿದರೂ ಅಷ್ಟರಲ್ಲಿ ಅಸುನೀಗಿದ್ದಾನೆ.
ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ. ಕಳೆದ ಆರು ತಿಂಗಳಿನಿಂದ ಕೋರೆಯಲ್ಲಿ ಕೆಲಸ ಸ್ಥಗಿತಗೊಂಡಿದ್ದ ಹಿನ್ನೆಲೆಯಲ್ಲಿ ಸುತ್ತ ಬೇಲಿ ಹಾಕಿದ್ದರೂ ನೀರು ನಿಂತಿತ್ತು.
- Advertisement -