Monday, April 29, 2024
spot_imgspot_img
spot_imgspot_img

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೂರೇ ದಿನದಲ್ಲಿ ಪ್ರೇಮಿಗಳ ಬರ್ಬರ ಕೊಲೆ..!

- Advertisement -G L Acharya panikkar
- Advertisement -
vtv vitla

ಪೋಷಕರ ವಿರೋಧ ಕಟ್ಟಿಕೊಂಡು ಮದುವೆಯಾದ ಮೂರೇ ದಿನದಲ್ಲಿ ನವ ಜೋಡಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ನವ ಜೋಡಿ ವಾಸವಿದ್ದ ಮನೆಗೆ ಸಂಜೆ 6 ಗಂಟೆ ಸುಮಾರಿಗೆ ಗ್ಯಾಂಗ್ ಒಂದು ನುಗ್ಗಿದೆ. ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಬಳಿಕ ಅಲ್ಲಿಂದ ಎಸ್ಕೇಪ್ ಆಗಿದೆ. ಮರಿ ಸೆಲ್ವಂ (24), ಕಾರ್ತಿಕಾ (20) ಮೃತ ದುರ್ದೈವಿಗಳು. ಈ ಜೋಡಿ ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿತ್ತು ಎಂದು ತಿಳಿಸಿದ್ದಾರೆ.

ಅಕ್ಟೋಬರ್ 31 ರಂದು ಈ ಜೋಡಿ ಮದುವೆ ಆಗಿತ್ತು. ಇವರ ಮದುವೆಗೆ ಪೋಷಕರ ವಿರೋಧ ಇತ್ತು. ಮದುವೆ ಬಳಿಕ ಮುರುಗೇಶನ್ ನಗರದಲ್ಲಿ ಇಬ್ಬರು ಒಟ್ಟಿಗೆ ವಾಸವಿದ್ದರು. ಕೊಲೆಯಾದ ವಿಚಾರ ತಿಳಿದು ಪೊಲೀಸರು ಅಲ್ಲಿಗೆ ಭೇಟಿ ನೀಡಿದ್ದರು. ನಂತರ ಇಬ್ಬರ ಮೃತದೇಹವನ್ನು ತೂಥುಕುಡಿ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ತೆಗೆದುಕೊಂಡು ಹೋಗಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. ಹತ್ಯೆಯಲ್ಲಿ 6 ಮಂದಿ ಬೈಕ್​ ಮೇಲೆ ಬಂದಿದ್ದರು ಅನ್ನೋ ಮಾಹಿತಿ ಇದೆ.

- Advertisement -

Related news

error: Content is protected !!