- Advertisement -
- Advertisement -
ಮಾಣಿ(ನ.10): ಇಲ್ಲಿಗೆ ಸಮೀಪದ ಬರಿಮಾರ್ ಗುಂಡ್ಯಡ್ಕ ಹಯಾತುಲ್ ಇಸ್ಲಾಂ ಮದ್ರಸ ಇದರ ವತಿಯಿಂದ
ವರ್ಷಂಪ್ರತಿ ಸಡಗರದಿಂದ ಆಚರಿಸಿಕೊಂಡು ಬರುತ್ತಿರುವ ಮೀಲಾದುನ್ನಬಿ ಕಾರ್ಯಕ್ರಮವನ್ನು ಈ ಬಾರಿ ಕೋವಿಡ್ ಪರಿಣಾಮದಿಂದ ಮುನ್ನೆಚ್ಚರಿಕೆಯಾಗಿ ಸರಳವಾಗಿ ಆಚರಿಸಲಾಯಿತು.
ಮೌಲೀದ್ ಪಾರಾಯಣ ದೊಂದಿಗೆ ಆರಂಭಿಸಿದ ಕಾರ್ಯಕ್ರಮವು ಮಕ್ಕಳ ಮೀಲಾದ್ ಕಾರ್ಯಕ್ರಮ ಮತ್ತು ಸರ್ಟಿಫಿಕೇಟ್ ಹಾಗೂ ಬಹುಮಾನ ವಿತರಣೆ ತಬರ್ರುಕ್ ಅನ್ನದಾನದೊಂದಿಗೆ ಸರಳವಾಗಿ ಮೀಲಾದುನ್ನಬಿ ಆಚರಿಸಲಾಯಿತು.
ರಫೀಕ್ ಮದನಿ ಶೇರ ಪ್ರಾಸ್ತಾವಿಕ ಭಾಷಣ ಮತ್ತು ದುವಾ ಆಶಿರ್ವಚನಗೈದರು. ಜಲೀಲ್ ಸಖಾಫಿ ಬರಿಮಾರ್ ಸ್ವಾಗತ ಭಾಷಣವನ್ನು ಮಾಡಿದರು,ಮುಸ್ತಫಾ ಶೇರಾ ಪ್ರವಾದಿ ಸಂದೇಶವನ್ನು ಸಾರಿದರು.
ಮದ್ರಸಾ ಅಧ್ಯಕ್ಷ ಸೈಯದ್ ಆಲಿ,ಅಬ್ದುಲ್ ಖಾದರ್ ಗುಂಡ್ಯಡ್ಕ,ಅಬೂಬಕ್ಕರ್ ಗುಂಡ್ಯಡ್ಕ ಹಾಗೂ ಹಫೀಲ್ ಬರಿಮಾರ್,ಮುಸ್ತಫ ಬರಿಮಾರ್ ಶರೀಫ್ ಉಪಸ್ಥಿತರಿದ್ದರು.ಎಂ ಡಿ ಯಹ್ಯಾ ಬರಿಮಾರ್ ಕಾರ್ಯಕ್ರಮ ನಿರೂಪಿಸಿದರು.
- Advertisement -