- Advertisement -
- Advertisement -


ಬೆಳ್ಳಾರೆ: ದಿವಂಗತ ಪ್ರವೀಣ್ ನೆಟ್ಟಾರು ಸ್ಮರಣಾರ್ಥ ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ನೆಟ್ಟಾರು ಶಾಲಾ ಮಕ್ಕಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮ ನಡೆಯಿತು.



ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವನಾಥ ಪೆಲತ್ತಮೂಲೆ ವಹಿಸಿದ್ದರು. ಸ್ವಯಂ ನಿವೃತ್ತ ಕಸ್ಟಮ್ ಅಧಿಕಾರಿ ಆರ್.ಕೆ ಭಟ್ ಕುರುಂಬುಡೇಲು, ಸಹಾಯಕ ಪ್ರಾಧ್ಯಾಪಕಿ ಸುಪ್ರಿಯಾ ಆರ್ ಆಚಾರ್, ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜು ಪೆರುವಾಜೆ ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದರು.





ಅಧ್ಯಕ್ಷರು ಅಕ್ಷಯ ಯುವಕ ಮಂಡಲ ನೆಟ್ಟಾರ್ ಪದ್ಮನಾಭ ಕೋಡಿಬೈಲ್, ಶೀನಪ್ಪ ಪೂಜಾರಿ ಕುತ್ಯಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವಸಂತ್ ಗೌಡ ನೆಟ್ಟಾರು ನಿರೂಪಿಸಿ, ನೆಟ್ಟಾರು ದ.ಕ.ಜಿ.ಪಂ.ಸ.ಹಿ.ಪ್ರಾ. ಶಾಲೆಯ ಮುಖ್ಯ ಶಿಕ್ಷಕಿ ನಳಿನಾಕ್ಷಿ ಸ್ವಾಗತಿಸಿದರು. ದಿ| ಪ್ರವೀಣ್ ನೆಟ್ಟಾರು ಅವರ ಧರ್ಮಪತ್ನಿ ನೂತನ ಪ್ರವೀಣ್ ಧನ್ಯವಾದ ಸಮರ್ಪಿಸಿದರು.

- Advertisement -








