ಬೆಳ್ಳಾರೆ: ಝಕರಿಯಾ ಜುಮಾ ಮಸೀದಿ ಬೆಳ್ಳಾರೆಗೆ ಈ ಹಿಂದೆ ವಕ್ಫ್ ನಿಂದ ನೇಮಕಗೊಂಡ ಮಹಮ್ಮದ್ ರಫಿಯವರು ಮಸೀದಿಯಲ್ಲಿ ಸಮಸ್ಯೆಗಳು ಬಂದಾಗ ಅದನ್ನು ಬಗೆಹರಿಸದೆ ಹಾಗೂ ಅಭಿವೃದ್ಧಿಯ ಕೆಲಸದ ಕಡೆ ಗಮನಕೊಡದೆ ಇರುವುದರ ಕುರಿತು ವಕ್ಫ್ ಬೋರ್ಡಿಗೆ ನೊಂದ ಜಮಾಅತರು ಇವರನ್ನು ಈ ಸ್ಥಾನದಿಂದ ತೆರವು ಗೊಳಿಸಬೇಕೆಂದು ಮನವಿಯನ್ನು ಸಲ್ಲಿಸಿದ್ದರು. ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಇದೀಗ ಬೆಳ್ಳಾರೆ ಝಕರಿಯಾ ಜುಮಾ ಮಸೀದಿಗೆ ನೂತನ ಆಡಳಿತಾಧಿಕಾರಿಯನ್ನು ನೇಮಕ ಮಾಡಲಾಗಿದೆ.
ಬೆಳ್ಳಾರೆ ಮಸೀದಿಯ ನೂತನ ಆಡಳಿತಾಧಿಕಾರಿಯಾಗಿ ನಿವೃತ್ತ ಅಬಕಾರಿ ಅಧಿಕಾರಿ, ಈ ಹಿಂದೆ ಬೆಳ್ಳಾರೆ ಝಕರಿಯಾ ಜುಮಾ ಮಸೀದಿಯಲ್ಲಿ 5ವರ್ಷಗಳ ಕಾಲ ಆಡಳಿತಾಧಿಕಾರಿಯಾಗಿ ಸೇವೆಯನ್ನು ಸಲ್ಲಿಸಿ, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿರುವ ಹಾಜಿ ಬಿ ಯಾಕೂಬ್ ಖಾನ್ ಇವರು ನೇಮಕ ಗೊಂಡಿರುತ್ತಾರೆ.
ಇವರು ಎಪ್ರಿಲ್ 19 ಸೋಮವಾರದಂದು ಆಡಳಿತಾಧಿಕಾರಿಯಾಗಿ ಅಧಿಕಾರವನ್ನು ವಹಿಸಿಕೊಳ್ಳಲಿದ್ದಾರೆ. ಅಬಕಾರಿ ಇಲಾಖೆಯಲ್ಲಿ ಉತ್ತಮ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ ಸುಮಾರು 40ವರ್ಷಗಳ ಕಾಲ ಸೇವಾನುಭವ ಹೊಂದಿ ನಿವೃತ್ತರಾಗಿ, ಪುತ್ತೂರು ಅನ್ಸಾರ್ ಜಮಾಅತ್ ಕಮಿಟಿಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಹಾಗೂ ಇತರ ಹಲವಾರು ಸಂಘ ಸಂಸ್ಥೆಗಳಲ್ಲಿ ಜವಾಬ್ದಾರಿಗಳನ್ನು ನಿಭಾಯಿಸಿದ ಅನುಭವವನ್ನು ಹೊಂದಿರುವವರಾಗಿದ್ದಾರೆ. ಈ ಹಿಂದೆ ಬೆಳ್ಳಾರೆಯಲ್ಲಿ ಅಧಿಕಾರ ವಹಿಸಿರುವ ಸಂದರ್ಭದಲ್ಲಿ ಇವರು ಸರಕಾರದ ಯಾವುದೇ ಅನುದಾನವನ್ನು ಸ್ವೀಕರಿಸದೆ ಉಚಿತ ಸೇವೆಯನ್ನು ನೀಡುತ್ತಿದ್ದರು.