Sunday, April 28, 2024
spot_imgspot_img
spot_imgspot_img

ಕೈಕೊಟ್ಟ ಪ್ರಿಯಕರ; ಡೆತ್ ನೋಟ್ ಬರೆದಿಟ್ಟು ಯುವತಿ ಆತ್ಮಹತ್ಯೆ

- Advertisement -G L Acharya panikkar
- Advertisement -

ಪ್ರಿಯಕರ ದೂರವಾಗಿದ್ದಕ್ಕೆ ಡೆತ್ ನೋಟ್ ಬರೆದಿಟ್ಟು ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆ.ಆರ್.ನಗರ ತಾಲೂಕು ಗೌಡೇನಹಳ್ಳಿಯಲ್ಲಿ ನಡೆದಿದೆ.

ಯುವಕನೊಬ್ಬ 4 ವರ್ಷದಿಂದ ಪ್ರೀತಿಸಿ, ಈಗ ಕೈಕೊಟ್ಟು ಮತ್ತೊಬ್ಬ ಯುವತಿ ಜತೆ ಓಡಾಡುತ್ತಿರುವುದನ್ನು ಕಂಡ ಯುವತಿ, ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ನಿಸರ್ಗ (20) ಆತ್ಮಹತ್ಯೆ ಮಾಡಿಕೊಂಡ ಯುವತಿ. ಕೆ.ಆರ್.ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಕಾಂ. ಪದವಿ ವ್ಯಾಸಂಗ ಮಾಡುತ್ತಿದ್ದ ಯುವತಿ, ಸುಹಾಸ್ ರೆಡ್ಡಿ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಇತ್ತೀಚೆಗೆ ನಿಸರ್ಗಗೆ ಕೈಕೊಟ್ಟ ಯುವಕ, ಮತ್ತೊಬ್ಬ ಯುವತಿಯ ಹಿಂದೆ ಬಿದ್ದಿದ್ದ. ಇದನ್ನೂ ನೋಡಿ ಸಹಿಸಲಾಗದೆ ಮನನೊಂದು ನಿಸರ್ಗ ವಿಷ ಸೇವಿಸಿದ್ದಾಳೆ. ಹೀಗಾಗಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.

ಸಾವಿಗೆ ಮುನ್ನ ಕೈ ಕೊಯ್ದುಕೊಂಡು ನೊಂದ ನಿಸರ್ಗ ರೀಲ್ಸ್ ಮಾಡಿದ್ದಾಳೆ. ನನ್ನ ಸಾವಿಗೆ ಸುಹಾಸ್, ಅನನ್ಯಾ ಹಾಗೂ ಆಕೆ ತಂದೆ ಗೋಪಾಲ ಕೃಷ್ಣ ಕಾರಣ ಎಂದು ಡೆತ್‌ ನೋಟ್‌ನಲ್ಲಿ ಬರೆದಿದ್ದಾಳೆ. ಇದರ ಪ್ರಕಾರ ಐದು ಮಂದಿ ವಿರುದ್ಧ ಕೆ.ಆರ್. ನಗರ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

- Advertisement -

Related news

error: Content is protected !!