Wednesday, April 24, 2024
spot_imgspot_img
spot_imgspot_img

ಬೆಳ್ತಂಗಡಿ: ನಟ ಚೇತನ್ ಹಿಂದೂ ಸಮಾಜವನ್ನು ಒಡೆಯುತ್ತಿದ್ದಾರೆ; ವಿ.ಹಿಂ.ಪ ತಾಲೂಕು ಅಧ್ಯಕ್ಷ ಸುಬ್ರಹ್ಮಣ್ಯ ಕುಮಾರ್ ಅಗರ್ತ ಆರೋಪ!

- Advertisement -G L Acharya panikkar
- Advertisement -

ಬೆಳ್ತಂಗಡಿ: ಇತ್ತೀಚೆಗೆ ಕನ್ನಡದ ನಟ ಚೇತನ್ ಎಂಬವರು ಹಿಂದೂ ಸಮಾಜದ ಒಂದು ಅವಿಭಾಜ್ಯ ಭಾಗವಾದ ಬ್ರಾಹ್ಮಣರ ವಿರುದ್ಧ ಅತ್ಯಂತ ಅವಹೇಳನಕಾರಿ ಮತ್ತು ದ್ವೇಷ ಭರಿತ ಕಾಲ್ಪನಿಕ ಮಾತುಗಳನ್ನು ಆಡಿದ್ದು, ಇದರ ಹಿಂದೆ ಹಿಂದೂ ಸಮಾಜವನ್ನು ಒಡೆಯುವ ಸ್ಪಷ್ಟ ಷಡ್ಯಂತರ ಇದೆ ಎಂದು ವಿ.ಹಿಂ.ಪ ತಾಲೂಕು ಅಧ್ಯಕ್ಷ ಸುಬ್ರಹ್ಮಣ್ಯ ಕುಮಾರ್ ಅಗರ್ತ ಆರೋಪಿಸಿದರು.

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಅವರು ಇಂದು ಬೆಳ್ತಂಗಡಿ ಎಸ್.ಡಿ.ಎಂ ಸಭಾ ಭವನದ ಪಿನಾಕಿ ಹಾಲ್‌ನಲ್ಲಿ ನಡೆದ , ಹಿಂದೂ ಸಮಾಜದ ಭಾಗವಾದ ಬ್ರಾಹ್ಮಣರ ಚಟುವಟಿಕೆಗಳಿಗೆ `ಆಧ್ಯಾತ್ಮಿಕ ಭಯೋತ್ಪಾದನೆ’ ಎಂಬಂತೆ ಬಿಂಬಿಸುವ ಮೂಲಕ ಹಿಂದೂ ಸಮಾಜದ ಇತರರು ಬ್ರಾಹ್ಮಣರನ್ನು ದ್ವೇಷಿಸುವಂತೆ ಮಾಡುವ ಉದ್ದೇಶ ಇದರ ಹಿಂದಿದೆ ಎಂಬುದು ಸ್ಪಷ್ಟವಾಗಿದೆ. ಮುಂದೆ ಹಿಂದೂ ಸಮಾಜದ ಯಾವುದೇ ವಿಭಾಗಗಳನ್ನು ಅವಹೇಳನ ಮಾಡುವ ಅಥವಾ ಪ್ರತ್ಯೇಕಿಸುವ ಯಾವುದೇ ಪ್ರಯತ್ನಗಳನ್ನು ವಿಶ್ವ ಹಿಂದೂ ಪರಿಷತ್ ಖಂಡಿಸುತ್ತದೆ ಎಂದು ಎಚ್ಚರಿಸಿದರು.

ಜಗತ್ತಿನ ಎಲ್ಲಾ ಧರ್ಮಗಳಲ್ಲಿಯೂ ಧರ್ಮದೊಳಗಿನ ಉಪವಿಭಾಗಗಳನ್ನು ನಾವು ಕಾಣುತ್ತೇವೆ. ಇದು ಎಲ್ಲಾ ಧರ್ಮಗಳೂ ರೂಪಿಸಿಕೊಂಡ ತಮ್ಮೊಳಗಿನ ಒಂದು ವ್ಯವಸ್ಥೆಯಾಗಿದ್ದು, ಹಿಂದು ಧರ್ಮದಲ್ಲಿ ಮಾತ್ರ ಕಂಡುಬರುವ ವಿಶೇಷತೆ ಅಲ್ಲ. ಹಿಂದೂ ಧರ್ಮವನ್ನು ಒಡೆಯುವ ದುರುದ್ದೇಶವನ್ನು ಹೊಂದಿರುವ ಶಕ್ತಿಗಳು ಬೇರೆ ವ್ಯಕ್ತಿಗಳನ್ನು ಈ ರೀತಿ ಉಪಯೋಗಿಸಿಕೊಳ್ಳುತ್ತಿದ್ದಾರೆ. ಹಿಂದೂ ಆಚರಣೆಗಳು, ನಂಬಿಕೆಗಳು, ಜೀವನ ಪದ್ಧತಿಗಳ ಬಗ್ಗೆ ಕೆಟ್ಟದಾಗಿ ಬಿಂಬಿಸುವ ಇಂತಹ ಪ್ರಯತ್ನಗಳನ್ನು ವಿ.ಹಿಂ.ಪ ವಿರೋಧಿಸುತ್ತದೆ, ನಟ ಚೇತನ್‌ರವರ ವಿರುದ್ದ ಮಾನ ಹಾನಿ ಹಾಗೂ ಭಾವನೆಗಳಿಗೆ ಧಕ್ಕೆ ತಂದ ಬಗ್ಗೆ ವಿ.ಹಿಂ.ಪ ಹಾಗೂ ಭಜರಂಗದಳದಿಂದ ಪೊಲೀಸರಿಗೆ ದೂರು ನೀಡಲಾಗುವುದು ಎಂದು ತಿಳಿಸಿದರು.

ವಿ.ಹಿಂ.ಪ ಜಿಲ್ಲಾ ಕಾರ್ಯಾಧ್ಯಕ್ಷ ಭಾಸ್ಕರ ಧರ್ಮಸ್ಥಳ , ವಿ.ಹಿಂ.ಪ ಜಿಲ್ಲಾ ಸಹ ಕಾರ್ಯದರ್ಶಿ ನವೀನ್ ನೆರಿಯ, ಡಾ. ಎಂ.ಎಂ ದಯಾಕರ್ ,ನ್ಯಾಯವಾದಿ ಬಿ.ಕೆ ಧನಂಜಯ ರಾವ್, ರಾಘವೇಂದ್ರ ಬೈಪಡಿತ್ತಾಯ, ಗಣಪತಿ ಭಟ್, ಕೇಶವ ಭಟ್ ಅತ್ತಾಜೆ, ಗಿರೀಶ್ ಡೋಂಗ್ರೆ, ವಿಶ್ವನಾಥ ಹೊಳ್ಳ, ಮೋಹನ್ ಉಪಸ್ಥಿತರಿದ್ದರು.

- Advertisement -

Related news

error: Content is protected !!