Saturday, April 27, 2024
spot_imgspot_img
spot_imgspot_img

ಬೆಳ್ತಂಗಡಿ: ಆನೆ ದಾಳಿಗೆ ಭತ್ತದ ಬೆಳೆ ನಾಶ..!

- Advertisement -G L Acharya panikkar
- Advertisement -

ಬೆಳ್ತಂಗಡಿ: ಒಂಟಿ ಆನೆಯೊಂದು ಬೆಳೆ ನಾಶ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ಬಂದರು ಗ್ರಾಮದ ಕುಂತಲಪಳಿಕೆ ನೆಲ್ಲಿಗೇರು ಎಂಬಲ್ಲಿ ನಡೆದಿದೆ.

ನೇತ್ರಾವತಿ ನದಿ ಸಮೀಪದ ಬೀಬಿಮಜಲು ಪ್ರದೇಶದಲ್ಲಿ ಮಂಗಳವಾರ ಸಂಜೆ ಆನೆಯ ಕಹಳೆಯನ್ನು ಗ್ರಾಮಸ್ಥರು ಕೇಳಿದ್ದಾರೆ. ಬುಧವಾರ ಮುಂಜಾನೆ ಅದೇ ಆನೆ ಮೋನಪ್ಪ ಗೌಡ ಎಂಬುವವರ ಜಮೀನಿಗೆ ನುಗ್ಗಿ ಭತ್ತದ ಬೆಳೆ ನಾಶಪಡಿಸಿದೆ. ಜತೆಗೆ ರಾಮಣ್ಣ ಎಂಬುವವರ ಜಮೀನಿನ ಕೃಷಿ ಪಂಪ್ ಮತ್ತು ಕೇಬಲ್‌ಗೂ ಆನೆ ಹಾನಿ ಮಾಡಿದೆ. ಅರಣ್ಯಾಧಿಕಾರಿಗಳು ಜಮೀನಿಗೆ ಭೇಟಿ ನೀಡಿ ನಷ್ಟದ ಅಂದಾಜು ಮಾಡಿದರು.

- Advertisement -

Related news

error: Content is protected !!