Friday, March 29, 2024
spot_imgspot_img
spot_imgspot_img

ಬೆಳ್ತಂಗಡಿ: ಆಟೋ ರಿಕ್ಷಾಕ್ಕೆ ಗುದ್ದಿದ ಕಂಟೈನರ್ ಲಾರಿ; ಪರಾರಿಯಾಗಲು ಯತ್ನಿಸಿದ ಚಾಲಕನನ್ನು ಸೆರೆಹಿಡಿದ ಸ್ಥಳೀಯರು!

- Advertisement -G L Acharya panikkar
- Advertisement -

ಬೆಳ್ತಂಗಡಿ: ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಆಟೋ ರಿಕ್ಷಾಕ್ಕೆ ಕಂಟೈನರ್ ಲಾರಿಯೊಂದು ಡಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದಾಗ ಸ್ಥಳಿಯರು ಸೇರಿ ಲಾರಿ ಸಮೇತ ಚಾಲಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಬೆಳ್ತಂಗಡಿಯ ವಾಣಿ ಶಾಲೆಯ ಬಳಿ ಜು.29 ಗುರುವಾರ ನಡೆದಿದೆ.

ಅದೃಷ್ಟವಶಾತ್ ರಿಕ್ಷಾ ಚಾಲಕ ಅಂಗಡಿಗೆ ತೆರಳಿದ್ದ ವೇಳೆ ಈ ಘಟನೆ ಸಂಭವಿಸಿದ್ದು, ಅಪಾಯದಿಂದ ಪಾರಾಗಿದ್ದಾರೆ. ಅತಿಯಾದ ವೇಗದಿಂದ ಬಂದ ಕಂಟೈನರ್ ಲಾರಿ ಆಟೋರಿಕ್ಷಾಗೆ ಗುದ್ದಿದ ಪರಿಣಾಮ ಆಟೋ ರಿಕ್ಷಾದ ಹಿಂಭಾಗ ಸಂಪೂರ್ಣ ಜಖಂಗೊಂಡಿದೆ.

ಈ ವೇಳೆ ಲಾರಿ ಚಾಲಕ ಲಾರಿ ಸಮೇತ ಸ್ಥಳದಿಂದ ಪರಾರಿಯಾಗಲು ಯತ್ನಿಸಿದಾಗ ಕೂಡಲೇ ಸ್ಥಳೀಯ ಯುವಕರು ಬೈಕ್ ಮೂಲಕ ಲಾರಿಯನ್ನು ಬೆನ್ನಟ್ಟಿದ್ದಾರೆ. ಮಡಂತ್ಯಾರು ಪಕ್ಕದ ಕೊಳ್ಳದ ಬೈಲು ಎಂಬಲ್ಲಿ ಸ್ಥಳೀಯರು ಲಾರಿಯನ್ನು ನಿಲ್ಲಿಸಿದ್ದಾರೆ. ಇದೀಗ ಲಾರಿ ಚಾಲಕನನ್ನು ಬೆಳ್ತಂಗಡಿ ಠಾಣೆಗೆ ಎಳೆದು ತಂದಿದ್ದಾರೆ.

driving
- Advertisement -

Related news

error: Content is protected !!