Monday, April 29, 2024
spot_imgspot_img
spot_imgspot_img

ಟ್ರಕ್ಕಿಂಗ್ ಬಂದಿದ್ದ ಯುವಕ ನಾಪತ್ತೆ ಪ್ರಕರಣ; 3 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆ..!

- Advertisement -G L Acharya panikkar
- Advertisement -

ಮೂಡುಗೆರೆ: ಪ್ರವಾಸಕ್ಕೆಂದು ಬಂದು ಕಣ್ಮರೆಯಾಗಿದ್ದ ಯುವಕನ ಶವ 3 ಸಾವಿರ ಅಡಿ ಪ್ರಪಾತದಲ್ಲಿ ಪತ್ತೆಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದುರ್ಗದಹಳ್ಳಿ ಸಮೀಪ ಇರುವ ರಾಣಿಜರಿ ವ್ಯೂ ಪಾಯಿಂಟ್ ಬಳಿ ನಡೆದಿದೆ.

ಬೆಂಗಳೂರು ಮೂಲದ ಯುವಕ ಭರತ್ (30) ಪ್ರವಾಸಕ್ಕೆಂದು ಬಂದು ರಾಣಿಜರಿ ವ್ಯೂ ಪಾಯಿಂಟ್ ಬಳಿ ಕಣ್ಮರೆಯಾಗಿದ್ದ. ದುರ್ಗದಹಳ್ಳಿ ಸಮೀಪ ಇರುವ ರಾಣಿಜರಿ ವ್ಯೂಪಾಯಿಂಟ್ ಬಳಿ ಬೈಕ್ ನಿಲ್ಲಿಸಿ K A.02, jw2033 ಬೈಕ್ ನ ಹಿಂಬದಿಯಲ್ಲಿ ತನ್ನ ಐಡಿ ಕಾರ್ಡ್ ಸಿಕ್ಕಿಸಿ, ಬ್ಯಾಗನ್ನು ಇಟ್ಟು, ಟೀ ಶರ್ಟ್ ನೇತು ಹಾಕಿ ಯುವಕ ನಾಪತ್ತೆಯಾಗಿದ್ದ.

ಈ ಸಂಬಂಧ ಪೊಲೀಸ್ ಇಲಾಖೆ ಹಾಗೂ ಸಮಾಜ ಸೇವಕ ಆರೀಫ್ ಶೋಧ ಕಾರ್ಯ ನಡೆಸಿ, ಕಣ್ಮರೆಯಾದ ಭರತ್ 3 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆಯಾಗಿದೆ. ಇನ್ನು ಶವವನ್ನು ಮೇಲೆತ್ತಲು ಸುಮಾರು 4 ರಿಂದ 5 ಗಂಟೆ ಬೇಕಾಗಬಹುದು ಎನ್ನಲಾಗಿದೆ. ಇನ್ನು ಯುವಕ ಭರತ್ ಆತ್ಮಹತ್ಯೆ ಮಾಡಿಕೊಂಡಿದ್ದ ಅಥವಾ ಕಾಲು ಜಾರಿ ಬಿದ್ದಿದ್ದ ಎಂಬ ಮಾಹಿತಿ ಪಿ.ಎಂ.ಅಥವಾ ಪೋಲಿಸರಿಂದ ತಿಳಿದು ಬರಬೇಕಿದೆ. ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!