- Advertisement -
- Advertisement -



ಭಾರತಮಾತಾ ಪೂಜನ – ರಕ್ಷಾಬಂಧನ ಕಾರ್ಯಕ್ರಮ ಕಶೆಕೋಡಿ ದೇವಸ್ಥಾನದಲ್ಲಿ ನಡೆಯಿತು. ಮಧ್ಯಾಹ್ನ ಬಳಿಕ ನಾಗಶ್ರೀ ಭಜನಾ ಮಂಡಳಿ ಕಮ್ಮಾಜೆ ಇವರಿಂದ ಭಜನಾ ಸೇವೆ ನಡೆಯಿತು. ಬಳಿಕ ಸಂಜೀವ ನಾಯಕ್ ಕಲ್ಲೇಗ ಆಡಳಿತ ಮೋಕ್ತೆಸರರು ಶ್ರೀ ಕ್ಷೇತ್ರ ಕಶೆಕೋಡಿ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಶ್ರೀಕಾಂತ್ ಶೆಟ್ಟಿ ಕಾರ್ಕಳ ದಿಕ್ಸೂಚಿ ಭಾಷಣ ಮಾಡಿದರು.


ಕಾರ್ಯಕ್ರಮದಲ್ಲಿ ಡೀಕಯ್ಯ ಪೂಜಾರಿ, ನಿವೃತ್ತ ಯೋಧರು, ಶ್ರೀಮತಿ ಕಮಲಾಕ್ಷಿ ನೀರಪಾದೆ ನಾಟಿ ವೈದ್ಯರು, ರಮೇಶ್ ಹೊಳ್ಳ ಪ್ರಗತಿಪರ ಬೇಸಾಯಗಾರರು, ರತ್ನಾಕರ ಜೋಗಿ ಬೊಂಡಾಲ ಗೋಪಾಲಕರು, ಗೋಪಾಲ್ ಕುಲಾಲ್ ನೆಲ್ಲಿ ಕಂಟ್ರಾಕ್ಟುದಾರರು ಉಪಸ್ಥಿತರಿದ್ದು ರಕ್ಷಾ ಬಂಧನ್ ಮಹತ್ವವನ್ನು ತಿಳಿಸಿದರು.

ಕು। ಮಮತಾ . ಕೆ ಪ್ರೇರಣಾ ಗೀತೆ ಹಾಗೂ ಗಂಗಾಧರ ಮಾಣಿ ವಂದೇಮಾತರಂ ಹಾಡಿದರು. ಈ ಸಂದರ್ಭದಲ್ಲಿ ಮಾತೆಯರು, ಮಹನಿಯರು, ಸೇರಿದಂತೆ ಹಿಂದೂ ಬಾಂಧವರು ಉಪಸ್ಥಿತರಿದ್ದರು.
- Advertisement -