- Advertisement -
- Advertisement -
ತಾ 24 ರಂದು ಭುವನ್ ಪೊನ್ನಣ್ಣ ಹಾಗು ಹರ್ಷಿಕಾ ಪೂಣಚ್ಚ ದಂಪತಿ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಅವರನ್ನು ಅವರ ಹುಬ್ಬಳ್ಳಿ ನಿವಾಸದಲ್ಲಿ ಭೇಟಿಯಾಗಿದ್ದಾರೆ.
ಇತ್ತೀಚಿಗೆ ಬೆಂಗಳೂರಿನ ಮಾಸ್ಕ್ ರಸ್ತೆಯಲ್ಲಿ ತಮಗಾದ ಕಹಿ ಘಟನೆ ಹಾಗೂ ಕರ್ನಾಟದಲ್ಲಿ ಪ್ರಸ್ತುತ ನಡೆಯುತ್ತಿರುವ ಘಟನೆಗಳ ಬಗ್ಗೆ ಚರ್ಚೆ ನಡೆಸಲಾಯಿತು ಎನ್ನಲಾಗಿದೆ. ಈ ಸಂದರ್ಭದಲ್ಲಿ ಸಚಿವರು ಇಂತಹ ಘಟನೆ ನಡೆಯಬಾರದಿತ್ತು, ಇದು ಖಂಡನೀಯ ವಿಚಾರ, ನಿಮ್ಮ ಜೊತೆಯಲ್ಲೇ ಈ ತರಹದ ಘಟನೆ ನಡೆದಿದಲ್ಲಿ ಸಾಮಾನ್ಯ ಜನರ ಕಥೆ ಏನಾದೀತು ಎಂದು ಅಭಿಪ್ರಾಯ ಪಟ್ಟಿದ್ದಾರೆ .
ನಿಮ್ಮ ಸುರಕ್ಷತೆಯ ಬಗ್ಗೆ ನೀವು ಚಿಂತಿಸಬೇಡಿ ಕೇಂದ್ರ ಸರ್ಕಾರ ನಿಮ್ಮೊಂದಿಗಿದೆ ಎಂದು ಭರವಸೆ ನೀಡಿದ್ದಾರೆ. ಚುನಾವಣೆ ಮುಗಿದ ಕೂಡಲೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಒಂದು ಶಾಶ್ವತವಾದ ಸೂಕ್ತ ಪರಿಹಾರ ಕಂಡು ಹಿಡಿಯುತ್ತೇವೆ, ಕೆಲವು ಪುಂಡರ ಅಟ್ಟಹಾಸ ಮಿತಿಮೀರಿದೆ ಎಂದು ತಿಳಿಸಿದರು.
- Advertisement -