- Advertisement -
- Advertisement -
ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ ಜಯಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಬೆಂಗಳೂರಿನ ಮಾಗಡಿ ರಸ್ತೆಯ ವೃದ್ಧಾಶ್ರಮದಲ್ಲಿ ನಿನ್ನೆ ತಡರಾತ್ರಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕೆಲತಿಂಗಳ ಹಿಂದೆ ಫೇಸ್ಬುಕ್ ಲೈವಲ್ಲಿ ನಿದ್ರೆ ಮಾತ್ರೆ ತಿಂದು ಆತ್ಮಹತ್ಯೆ ಗೆ ವಿಫಲಯತ್ನ ನಡೆಸಿ ಸುದ್ದಿಯಾಗಿದ್ದ ಜಯಶ್ರೀ ಬಳಿಕ ಕಿಚ್ಚಸುದೀಪ್ ಮಾತಿನಿಂದ ಕೊಂಚ ಸುಧಾರಿಸಿದ್ದರು.
ಉಪ್ಪು… ಹುಳಿ..ಖಾರ ಚಲನಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಜಯಶ್ರೀ ರಾಮಯ್ಯ ಕೆಲಸಮಯಗಳಿಂದ ಡಿಪ್ರೆಶನ್ ಗೆ ಒಳಗಾಗಿದ್ದು, ಹೆತ್ತವರನ್ನು ದೂರಮಾಡಿ ಮಾಗಡಿ ರಸ್ತೆಯ ಪ್ರಗತಿ ಲೇಔಟ್ ನಲ್ಲಿರುವ ಸಂಧ್ಯಾ ಕಿರಣ ವೃದ್ಧಾಶ್ರಮ ಸೇರಿದ್ದರು.
ಈ ಬಗ್ಗೆ ಮಾದನಾಯಕ ನ ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಟಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. ಹೆಚ್ಚಿನ ಮಾಹಿತಿಯು ಪೊಲೀಸರ ವಿಚಾರಣೆಯಿಂದ ದೊರಕಬೇಕಾಗಿದೆ.
- Advertisement -