Sunday, July 26, 2026
spot_imgspot_img
spot_imgspot_img

ಎಚ್​ಡಿಕೆಗೆ RSS ಇತಿಹಾಸದ ಪುಸ್ತಕ ರವಾನಿಸಿದ ಬಿಜೆಪಿ ಕಾರ್ಯಕರ್ತರು

- Advertisement -
- Advertisement -
driving

ಧಾರವಾಡ: ರಾಜ್ಯದ ಹಾನಗಲ್​​ ಮತ್ತು ಸಿಂದಗಿ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆ ಆಗುತ್ತಿದ್ದಂತೆಯೇ ಮಾಜಿ ಸಿಎಂ ಎಚ್​.ಡಿ ಕುಮಾರಸ್ವಾಮಿ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ವಿರುದ್ಧ ಕೆಂಡಕಾರುತ್ತಿದ್ದಾರೆ. ಪ್ರತಿನಿತ್ಯ ಟ್ವೀಟ್​​ ಮಾಡುತ್ತಾ ಆರ್​ಎಸ್​ಎಸ್​ ವಿರುದ್ಧ ಎಚ್​​ಡಿಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೀಗಿರುವಾಗಲೇ ಮಾಜಿ ಸಿಎಂ ಎಚ್​​.ಡಿ ಕುಮಾರಸ್ವಾಮಿ ಆರ್​ಎಸ್​ಎಸ್​ ಇತಿಹಾಸದ ಕುರಿತಾದ ಪುಸ್ತಕ ರವಾನಿಸಿದ್ದಾರೆ. ಆರ್​ಎಸ್​ಎಸ್​ 360 ವಿಸ್ತೃತ ಪುಸ್ತಕ ರವಾನೆ ಮಾಡಿದ್ದಾರೆ. ಧಾರವಾಡ ಜೆಡಿಎಸ್​​ ಜಿಲ್ಲಾಧ್ಯಕ್ಷ ಗುರುರಾಜ ಹುಣಶಿಮರದ ಅವರ ಮೂಲಕ ಪುಸ್ತಕ ರವಾನಿಸಿದ್ದಾರೆ. ಲಿಂಗಾಯತ ಭವನದ ಮುಂದೆಯೇ ಹುಣಶಿಮರದ ಅವರಿಗೆ ಬಿಜೆಪಿ ಕಾರ್ಯಕರ್ತರು ಪುಸ್ತಕ ನೀಡಿದ್ದಾರೆ.

- Advertisement -

Related news

error: Content is protected !!