- Advertisement -
- Advertisement -
ಪುತ್ತೂರು: ಬಿಜೆಪಿ ಕಾರ್ಯಕರ್ತನ ಮನೆಗೆ ಕಾಂಗ್ರೇಸ್ ಕಾರ್ಯಕತರು ನುಗ್ಗಿ ದಾಂಧಲೆ ನಡೆಸಿ ಜೀವಬೆದರಿಕೆಯೊಡ್ಡಿದ ಘಟನೆ ಪುತ್ತೂರು, ಚಿಕ್ಕಮುಡ್ನೂರು ಗ್ರಾಮದ ತಾರಿಗುಡ್ಡೆ ಎಂಬಲ್ಲಿ ನಡೆದಿದೆ.
ಜಯಾನಂದ ಕೆ ಎಂಬವರ ಮನೆಗೆ ಇಂದು ಸಂಜೆ ಸುಮಾರು ನಾಲ್ಕು ಗಂಟೆಗೆ ಏಕಾಏಕಿಯಾಗಿ ಆರೋಪಿಗಳಾದ ಪ್ರಜ್ವಲ್ ರೈ, ಸನತ್ ರೈ ಮತ್ತು 15 ಜನರು ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ಜಯಾನಂದ ಮತ್ತು ಅವರ ತಾಯಿ, ಪತ್ನಿ ಮತ್ತು ಮಕ್ಕಳಿಗೆ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಮನೆಯ ಗೋಡೆಗೆ ಕಾಲಿನಿಂದ ತುಳಿದು ಜಯಾನಂದರರನ್ನು ಉದ್ದೇಶಿಸಿ* ನೀನು ಬಾರಿ ಪೇಸ್ ಬುಕ್ ನಲ್ಲಿ, ಬಿಜೆಪಿ ಬಗ್ಗೆ, ಬರೆಯುತ್ತಿಯಾ?” ಎಂದು ಗದರಿಸಿ “ನಿನ್ನನ್ನು ನೋಡಿಕೊಳ್ಳು ತ್ತೇನೆ” ಎಂಬುದಾಗಿ ಜೀವ ಬೆದರಿಕೆಯೊಡ್ಡಿದ್ದಾರೆ.
ಘಟನೆ ಬಗ್ಗೆ ಆರೋಪಿ ಗಳ ವಿರುದ್ದಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ IPC 1860(U/s-448,143,147,504,506,149) ರಂತೆ ಪ್ರಕರಣ ದಾಖಲಾಗಿದೆ.
- Advertisement -