Sunday, June 29, 2025
spot_imgspot_img
spot_imgspot_img

ಪೊಲೀಸ್ ಠಾಣೆಗೆ ಹೋದ ಯುವಕ ನಾಪತ್ತೆ: ಅಳಲು ವ್ಯಕ್ತಪಡಿಸಿದ ಕುಟುಂಬಸ್ಥರು.

- Advertisement -
- Advertisement -

ವಿಟ್ಲ: ಸಹೋದರನಾದ ಎಚ್. ಎಂ. ಖಾಲೀದ್ ಕಳೆದ ಆರು ದಿನಗಳಿಂದ ನಾಪತ್ತೆಯಾಗಿದ್ದು, ಹಲವು ಬಾರಿ ಪೊಲೀಸರಲ್ಲಿ ಈ ಬಗ್ಗೆ ವಿಚಾರಿಸಿದರೂ ಸೂಕ್ತ ಮಾಹಿತಿ ಸಿಗದ ಕಾರಣ ಬಂಟ್ವಾಳ ಡಿವೈಎಸ್‌ಪಿ ಗೆ ದೂರು ನೀಡಿದ್ದೇವೆ ಎಂದು ಸಹೋದರ ಮಹಮ್ಮದ್ ರಫೀಕ್ ಹೇಳಿದರು.

ವಿಟ್ಲ ಠಾಣೆಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋದವನು ಮನೆಗೆ ಹಿಂತಿರುಗಿಲ್ಲ. ಸಹೋದರ ಯಾವುದೇ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ, ಸದ್ಯ ಆತನ ಮೊಬೈಲ್ ಸ್ವಿಚ್ ಆಫ್ ಆಗಿದೆ. ವಿಟ್ಲ ಪೊಲೀಸರಲ್ಲಿ ವಿಚಾರಿಸಿದಾಗ ಚಿಕ್ಕಮಂಗಳೂರು ಪೊಲೀಸರು ಕರೆದುಕೊಂಡು ಹೋಗಿರಬೇಕು ಎಂದು ಹೇಳುತ್ತಾರೆ. ಅಲ್ಲಿ ವಿಚಾರಿಸಿದರೆ ನಾವು ಅಂತವರನ್ನು ಕರೆದುಕೊಂಡು ಹೋಗಿಲ್ಲ ಎಂದು ಹೇಳಿತ್ತಿದ್ದಾರೆ. ಸಹೋದರನ ಪರಿಸ್ಥಿತಿ ಹೇಗಿ ಎಂದು ತಿಳಿಯುತ್ತಿಲ್ಲ ತಾಯಿಯೂ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಅಕ್ರಮ ಬಂಧನದಿಂದ ಬಿಡಿಸಿಕೊಂಡಬೇಕೆಂದು ವಿಟ್ಲ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಹೇಳಿದರು. ಜೈನಾಬಿ, ರಶೀದ್ ಉಪಸ್ಥಿತರಿದ್ದರು.

- Advertisement -

Related news

error: Content is protected !!