Monday, April 29, 2024
spot_imgspot_img
spot_imgspot_img

ಆಸ್ತಿ ವಿಚಾರಕ್ಕಾಗಿ ಅಣ್ಣ ,ಅತ್ತಿಗೆಯನ್ನೆ ಕೊಂದ ಸಹೋದರ

- Advertisement -G L Acharya panikkar
- Advertisement -

ಆಸ್ತಿ ವಿಚಾರಕ್ಕಾಗಿ ಅಣ್ಣ ,ಅತ್ತಿಗೆಯನ್ನು ಮಚ್ಚಿನಿಂದ ಕೊಚ್ಚಿ    ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮೈಸೂರಿನ ನರಸೀಪುರ ತಾಲೂಕಿನ ನುಗ್ಗಳ್ಳಿಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಪತಿ ಶಿವಲಿಂಗೇಗೌಡ(55), ಪತ್ನಿ ಭಾರತಿ(47) ಮೃತಪಟ್ಟವರ.

ಶಿವಲಿಂಗೇಗೌಡರ ಸಹೋದರರಾದ  ಹನುಮಂತೇಗೌಡ (50) ಕೊಲೆ ಮಾಡಿದ್ದಾನೆ. ಘಟನಾ ಸ್ಥಳಕ್ಕೆ ಬನ್ನೂರು ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ ಆರೋಪಿ ಹನುಮಂತೇಗೌಡನನ್ನು ಬಂಧಿಸಿದ್ದಾರೆ.

15 ಗುಂಟೆ ಜಮೀನಿಗಾಗಿ ಸಹೋದರರ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು. ರಾಜಿ ಪಂಚಾಯಿತಿಗೂ ಒಪ್ಪದೆ, ಜಮೀನಿಗಾಗಿ ಅಣ್ಣ ಮತ್ತು ಅತ್ತಿಗೆಯನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿ ಕೃತ್ಯ ಎಸಗಿದ ಬಳಿಕ ಹನುಮಂತೇಗೌಡ ಬನ್ನೂರು ಪೊಲೀಸ್ ಠಾಣೆಗೆ ಕರೆ ಮಾಡಿ ತಾನು ಕೊಲೆ ಮಾಡಿರುವುದಾಗಿ ಹೇಳಿದ್ದಾನೆ. ಸದ್ಯ ಬನ್ನೂರು ಪೊಲೀಸರು ಹನುಮಂತೇಗೌಡನನ್ನು ಬಂಧಿಸಿದ್ದಾರೆ.

- Advertisement -

Related news

error: Content is protected !!