ಜಾಗತಿಕ ಬಂಟರ ಸಂಘಗಳ ಒಕ್ಕೂಟದ ( ರಿ ) ನೇತ್ರತ್ವದಲ್ಲಿ ಉಡುಪಿಯಲ್ಲಿ ನಿನ್ನೆ ನಡೆದ ಬಡ ವಿಧ್ಯಾರ್ಥಿಗಳಿಗೆ ವಿಧ್ಯಾರ್ಥಿ ವೇತನ, ಮನೆ ನಿರ್ಮಾಣ ಹಾಗೂ ಹಸ್ತಾಂತರ , ಮದುವೆ ಸಹಾಯದನ ಹಸ್ತಾಂತರ ಕಾರ್ಯಕ್ರಮದಲ್ಲಿ ಕೆ.ಪಿ.ಸಿ.ಸಿ ಅಧ್ಯಕ್ಷರಾದ ಶ್ರೀ ಡಿ.ಕೆ ಶಿವಕುಮಾರ್ ರವರು ಮುಖ್ಯ ಆಥಿತಿಯಾಗಿ ಭಾಗವಹಿಸಿದ್ದರು .
‘ಬಂಟರ ಸಂಘ ಒಳ್ಳೆಯ ಕೆಲಸ ಮಾಡುತ್ತಿದೆ. ಕೋಟ್ಯಂತರ ಹಣವನ್ನು ಅಗತ್ಯ ಉಳ್ಳವರಿಗೆ ದಾನ ರೂಪದಲ್ಲಿ ಕೊಡುತ್ತಿದೆ. ತುಂಬಾ ಸಂತೋಷ. ನಾವು ಹುಟ್ಟಿ ಸಾಯುವ ಮುನ್ನ ಸಮಾಜಕ್ಕಾಗಿ ಏನಾದರೂ ಮಾಡಿ ಹೋಗೋಣ. ನಿಮ್ಮ ಪುಣ್ಯಕಾರ್ಯದಲ್ಲಿ ನನ್ನಿಂದ ಏನಾಗಬೇಕು ಹೇಳಿ ನನ್ನಿಂದ ಆಗುವ ಸಹಾಯ ಮಾಡುತ್ತೇನೆ ಎಂದು ಅವರು ಭರವಸೆ ನೀಡಿದರು.
ವೇದಿಕೆಯಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್ ಹಾಗೂ ಜಾಗತಿಕ ಬಂಟರ ಸಂಘದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ , ವಿನಯ ಕುಮಾರ್ ಸೊರಕೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷರು ಕಾವು ಹೇಮನಾಥ್ ಶೆಟ್ಟಿ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಅಭಯಚಂದ್ರ ಜೈನ್, ಮಿಥುನ್ ರೈ ಮತ್ತಿತರರು ಜೊತೆಗಿದ್ದರು.