Thursday, April 18, 2024
spot_imgspot_img
spot_imgspot_img

ಬಹರೈನ್ ಬಂಟರ ಸಂಘದ ವತಿಯಿಂದ ನಡೆದ ವಿವಿಧ ಸ್ಪರ್ಧೆ ಗಳ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭ

- Advertisement -G L Acharya panikkar
- Advertisement -

ಬಹರೈನ್: ಬಂಟ್ಸ್ ಬಹರೈನ್ ವತಿಯಿಂದ ನಡೆದ ಡಾನ್ಸ್ ಸ್ಪರ್ಧೆ , ಗಾನಕೋಗಿಲೆ-2020 ಮತ್ತು ಬಂಟ ಬಾಂಧವರಿಗೆ ಏರ್ಪಡಿಸಿದ ಲೂಡೋ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆಯನ್ನು ಸರಳ ಸಮಾರಂಭದಲ್ಲಿ ನೆರವೇರಿಸಲಾಯಿತು.

ಕೊರೊನಾ ಮಾಹಾಮಾರಿಯ ಈ ದಿನಗಳಲ್ಲಿ ಮನರಂಜನಾ ಕಾರ್ಯಕ್ರಮಗಳಿಗೆ ತೊಡಕು ಉಂಟಾದಾಗ ಆನ್ ಲೈನ್ ಮುಖಾಂತರ ವಿವಿಧ ಸ್ಪರ್ಧೆಗಳನ್ನು ಕೊಲ್ಲಿ ರಾಷ್ಟ್ರದ ಬಂಟ ಬಾಂಧವರಿಗೆ ಸೀಮಿತಗೊಳಿಸಿ ಆ ಮೂಲಕ ಪ್ರತಿಭೆಗಳನ್ನು ಗುರುತಿಸಿದ ಕೀರ್ತಿ ಬಹರೈನ್ ಬಂಟರ ಸಂಘದ ಸಾಧನೆ.

ಬಹುಮಾನ ವಿತರಣೆಯ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಬಹರೈನ್ ಕನ್ನಡ ಸಂಘದ ಅಧ್ಯಕ್ಷರಾಗಿ ಪ್ರದೀಪ್ ಶೆಟ್ಟಿಯವರು ಬಂಟ್ಸ್ ಬಹರೈನ್ ನ ಈ ಸಾಧನೆಗೆ ಮೆಚ್ಚುಗೆ ಸೂಸಿ ಶ್ಲಾಘಿಸಿದರು.

ಯಕ್ಷಧ್ರುವ ಪಟ್ಲ ಫೌಂಡೇಶನ್ ಬಹರೈನ್-ಸೌದಿ ಘಟಕದ ಅಧ್ಯಕ್ಷರಾದ ಶ್ರೀ ರಾಜೇಶ್ ಬಿ. ಶೆಟ್ಟಿ, ಜಾನ್ಸನ್& ಜಾನ್ಸನ್ ಕಂಪನಿಯ ಮುಖ್ಯಸ್ಥರಾದ ಅಮರನಾಥ್ ರೈ , ಉದ್ಯಮಿ ಶಶಿಧರ್ ಶೆಟ್ಟಿ ಕೆಂಜೂರು ಪಾಲ್ಗೊಂಡು ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದರು. ‌

ಬಹರೈನ್ ಬಂಟರ ಸಂಘದ ಅಧ್ಯಕ್ಷ‌ರಾದ ಮೋಹನದಾಸ್ ರೈ ಎರುಂಬು ಪ್ರಾಸ್ತಾವಿಕವಾಗಿ ಮಾತನಾಡಿ ಸಂಘದ ಮುಂದಿನ ಕಾರ್ಯಕ್ರಮಗಳ ಬಗ್ಗೆ ಮಾಹಿತಿ‌ ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಕಾರ್ಯಕಾರಿ ಸಮಿತಿಯ ಗುರುರಾಜ್ ನಾಯ್ಕ್, ಸಂದೀಪ್ ಅಡಪ್ಪ ಉಪಸ್ಥಿತರಿದ್ದರು.

ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ದುರ್ಗಾಪ್ರಸಾದ್ ಶೆಟ್ಟಿ ಸ್ಪರ್ಧಾ ವಿಜೇತರ ಪಟ್ಟಿಯನ್ನು ವಾಚಿಸಿದರು.‌ ಸಂಘದ ಉಪಾಧ್ಯಕ್ಷರಾದ ಅನಿಲ್ ನಾಯ್ಕ್, ಕಾರ್ಯಕ್ರಮ ನಿರೂಪಣೆ ಮಾಡಿದರು. ಶ್ರೀಮತಿ ಅರ್ಚನಾ ಸಂದೀಪ್ ಶೆಟ್ಟಿ ಸ್ವಾಗತಿಸಿ ,‌ಸಂಘದ‌ ಸಂಘಟನಾ ಕಾರ್ಯದರ್ಶಿ ವಿಕ್ರಮ್ ಶೆಟ್ಟಿಯವರು ಧನ್ಯವಾದ ಸಮರ್ಪಣೆ ಮಾಡಿದರು. ಕಾರ್ಯಕ್ರಮದ‌ ಕೊನೆಯಲ್ಲಿ ಲಘು ಉಪಾಹಾರವನ್ನು ವಿತರಿಸಲಾಯಿತು.

- Advertisement -

Related news

error: Content is protected !!