ಆನೇಕಲ್: ಹಿಟ್ ಆಯಂಡ್ ರನ್ಗೆ ಬೈಕ್ ಸವಾರನೊಬ್ಬ ಬಲಿಯಾಗಿದ್ದಾನೆ. ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣದ ಮಿರ್ಜಾ ರಸ್ತೆಯ ಪೊಲೀಸ್ ಕ್ವಾಟ್ರಸ್ ಮುಂಭಾಗದಲ್ಲಿ ನಡೆದಿದೆ.
ಮೃತಪಟ್ಟ ಬೈಕ್ ಸವಾರ ಕಲಬುರಗಿ ಮೂಲದ ಶೇಕ್ ಮೆಹಬೂಬ್, ಶಾಹಿನಾ ದಂಪತಿಯ ಪುತ್ರ ಶೇಕ್ ಶಹಬಾಶ್ (17) ಎಂದು ಗುರುತಿಸಲಾಗಿದೆ.
ವೆಂಕಟೇಶ್ವರ ಸರ್ಕಲ್ನಿಂದ ರಾಘವೇಂದ್ರ ಭವನ್ ಸರ್ಕಲ್ ಮಾರ್ಗವಾಗಿ ಹೋಗುವಾಗ ಬಸ್ ವೊಂದು ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಶೇಕ್ ಶಹಬಾಶ್ ದೇಹವು ಛಿದ್ರ ಛಿದ್ರವಾಗಿದೆ.
ಕಲಬುರಗಿ ಮೂಲದ ಶೇಕ್ ಮೆಹಬೂಬ್, ಶಾಹಿನಾ ದಂಪತಿಯ ಪುತ್ರ ಶೇಕ್ ಶಹಬಾಶ್, ಕಳೆದ 15 ವರ್ಷಗಳಿಂದ ಆನೇಕಲ್ನಲ್ಲಿ ನೆಲೆಸಿದ್ದರು. ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಶೇಕ್ ಶಹಬಾಶ್, ಕೊನೆಯ ದಿನದ ಪರೀಕ್ಷೆ ಬರೆಯಬೇಕಿತ್ತು. ಖಾಸಗಿ ಕಂಪನಿಯ ಬಸ್ ಡಿಕ್ಕಿ ಹೊಡೆದ ಕಾರಣಕ್ಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೆಳಗ್ಗೆ ಹಾಲು ತರಲು ಮನೆಯಿಂದ ಸ್ಕೂಟರ್ನಲ್ಲಿ ಹೊರಟಿದ್ದ. ಈ ವೇಳೆ ಪೊಲೀಸ್ ಕ್ವಾಟ್ರಸ್ ಮುಂಭಾಗ ಸ್ಟ್ರೈಡ್ಸ್ ಕಂಪನಿಯ ಬಸ್ ಡಿಕ್ಕಿ ಹೊಡೆದಿತ್ತು. ರಸ್ತೆಗೆ ಬಿದ್ದ ಶೇಕ್ ಶಹಬಾಶ್ ತಲೆಯ ಮೇಲೆ ಹರಿದಿತ್ತು. ಅಪಘಾತದ ನಂತರ ಪರಾರಿಯಾಗಿದ್ದ ಚಾಲಕನನ್ನು ಬಸ್ ಸಮೇತ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನಾ ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.