ವಿಟ್ಲ: ಚಾಲಕನ ನಿರ್ಲಕ್ಷ್ಯತನ ಮತ್ತು ಅಜಾಗರೂಕತೆಯಿಂದ ಪ್ರಯಾಣಿಕರೊಬ್ಬರು ಬಸ್ಸಿನಿಂದ ಹೊರಕ್ಕೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡ ಘಟನೆ ದು ಪೆರುವಾಯಿ ಗ್ರಾಮದ ಕೆದುವಾರು ಬಸ್ಸು ನಿಲ್ದಾಣದ ಬಳಿ ನಡೆದಿದೆ.
ಬಂಟ್ವಾಳ ತಾಲೂಕಿನ ಕೆದುವಾರು ದಿ. ಆದಂ ಡಿ ಸೋಜರವರ ಪುತ್ರ ಇನಾಸ್ ಡಿಸೋಜಾ (83 ವ.)ರವರು ಗಾಯಗೊಂಡವರು.
ಇನಾಸ್ ಡಿಸೋಜರವರು ಆ.15ರಂದು ವಿಟ್ಲ ಪೇಟೆಗೆ ತೆರಳಿ ಬಳಿಕ ಪಕಳಕುಂಜ ಭಾಗಕ್ಕೆ ತೆರಳುವ ಸರಕಾರಿ ಬಸ್ಸ ನಲ್ಲಿ ಮರಳಿ ಮನೆ ಕಡೆ ಬರುತ್ತಿರುವ ವೇಳೆ ಕೆದುವಾರು ಬಸ್ಸು ನಿಲ್ದಾಣ ತಲುಪುತ್ತಿದ್ದಂತೆ ಅವರು ಬಸ್ಸಿನಿಂದ ಇಳಿಯಲು ಎದ್ದು ನಿಂತಾಗ ಚಾಲಕನ ನಿರ್ಲಕ್ಷ್ಯತನ ಮತ್ತು ಅಜಾಗರೂಕತೆಯಿಂದ ತಿರುವಿನ ಬಳಿ ಒಮ್ಮೆಲೇ ಬಸ್ಸು ಚಲಾಯಿಸಿದ ಪರಿಣಾಮ ಬಸ್ಸಿ ನ ಹಿಂಬಾಗಿಲ ಮೂಲಕ ರಸ್ತೆ ಗೆಸೆಯಲ್ಪಟ್ಟಿದ್ದರು.
ಗಂಭೀರ ಗಾಯಗೊಂಡಿದ್ದ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆತಂದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಲ್ಲಿ ಅವರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳುವಿನ ಪುತ್ರಿ ಪ್ರಮೀಳಾ ಡಿಸೋಜಾರವರು ನೀಡಿದ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.