- Advertisement -
- Advertisement -


ಬೈರಂಪಳ್ಳಿ: ಬೈರಂಪಳ್ಳಿ ಗ್ರಾ ಪಂ ವ್ಯಾಪ್ತಿಯ 41ನೇ ಶೀರೂರು 1ನೇ ವಾರ್ಡ್ ನ ನ್ಯೂ ಕಲ್ಲಾಳ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಹಾಗೂ ಗ್ರಾಮಸ್ಥರೊಂದಿಗೆ ವನಮಹೋತ್ಸವ, ವೃಕ್ಷಾರೋಹಣ ಕಾರ್ಯಕ್ರಮವನ್ನು ಶ್ರಮಿಕ ತರುಣರ ತಂಡ ಬೈರಂಪಳ್ಳಿ ಸಂಘಟನೆಯ ನೇತೃತ್ವದಲ್ಲಿ ಆಯೋಜಿಸಲಾಯಿತು.


ಕಾರ್ಯಕ್ರಮದಲ್ಲಿ ಗ್ರಾಮಸ್ಥರಿಗೆ ಔಷಧೀಯ ಹಾಗೂ ಇತರ ಸಸಿಗಳನ್ನು ನೀಡಿ ಅದರ ಮಹತ್ವವನ್ನು ತಿಳಿಯಪಡಿಸುವ ಮೂಲಕ ಮತ್ತು ಶಾಲಾ ಆವರಣದಲ್ಲಿ ಮಕ್ಕಳೊಂದಿಗೆ ಗಿಡಗಳನ್ನು ನೆಟ್ಟು ಆಚರಿಸಲಾಯಿತು ಕಾರ್ಯಕ್ರಮದಲ್ಲಿ ಬೈರಂಪಳ್ಳಿ ಗ್ರಾಮ ಪಂಚಾಯಿತಿ ಸದಸ್ಯರು ,ಶ್ರಮಿಕ ತರುಣರ ತಂಡ ಬೈರಂಪಳ್ಳಿ ಸಂಸ್ಥಾಪಕರು ಡಾ ಸಂತೋಷ್ ಕುಮಾರ್ ಬೈರಂಪಳ್ಳಿ , ಎಸ್ಡಿಎಂಸಿ ಅಧ್ಯಕ್ಷೆ ಶಶಿಕಲಾ ಪೂಜಾರಿ, ಶ್ರಮಿಕ ಮಹಿಳಾ ಘಟಕದ, ಶಾಲೆಯ ಶಿಕ್ಷಕಿ ಸವಿತಾ ಮತ್ತು ವಿಧ್ಯಾಕ್ಷಿ, ಅಧ್ಯಕ್ಷೆ ಸಂಪ ಪೂಜಾರಿ, ಅಂಗನವಾಡಿ ಕಾರ್ಯಕರ್ತೆ ಅನಿತಾ ಹೆಗಡೆ ಉಪಸ್ಥಿತರಿದ್ದರು.



- Advertisement -