- Advertisement -
- Advertisement -
ವಿಟ್ಲ : ವಿಟ್ಲ ಮುಡ್ನೂರು ಗ್ರಾಮದ ಚಂದಳಿಕೆ ಕಾಂತಮೂಲೆ ಎಂಬಲ್ಲಿ ತಂದೆಯೇ ಮಗನನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂದಿಸಿದಂತೆ ಘಟನಾ ಸ್ಥಳಕ್ಕೆ ಇಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಋಷಿಕೇಶ್ ಸೋನಾವಣೆಯವರು ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.
ಈ ವೇಳೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ಅಧೀಕ್ಷಕ ಋಷಿಕೇಶ್ ಸೋನಾವಣೆ ಈ ಘಟನೆಗೆ ಸಂಬಂದಿಸಿ ಅವರ ಆರೋಪಿ ವಸಂತ ಗೌಡ ಅವರ ದೊಡ್ಡ ಮಗ ಎಂ.ವಿ. ಮುರಳಿರವರು ನೀಡಿದ ದೂರಿನನ್ವಯ ಠಾಣೆಯಲ್ಲಿ ೩೦೨ ಕಾಯ್ದೆ ಯ ಅಡಿಯಲ್ಲಿ ಕೊಲೆ ಕೇಸು ದಾಖಲು ಮಾಡಿರುತ್ತೇ ವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಸಂತ ಗೌಡರವರನ್ನು ಕಸ್ಟಡಿಗೆ ತೆಗೆದು ತನಿಖೆ ನಡೆಸುತ್ತಿದ್ದೇವೆ. ಯಾವ ಕಾರಣಕ್ಕಾಗಿ ಕೊಲೆ ನಡೆದಿದೆ ಎನ್ನುವ ಕುರಿತು ತನಿಖೆ ನಡೆಸಲಾಗುತ್ತಿದೆ. ಸದ್ಯಕ್ಕೆ ಆ ಕೊಲೆಯನ್ನು ಆತನ ತಂದೆಯೇ ನಡೆಸಿರುವುದು ಮೇಲ್ನೋ ಟಕ್ಕೆ ಕಂಡುಬಂದಿದೆ. ತನಿಖೆ ಪ್ರಗತಿಯಲ್ಲಿದೆ ಎಂದರು.
- Advertisement -