ವಿಟ್ಲ: ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ಚಂದಳಿಕೆ ಇಲ್ಲಿನ ವಾರ್ಷಿಕ ಸಂಭ್ರಮ 2023 ಕಾರ್ಯಕ್ರಮವು ಡಿ.30ರಂದು ನಡೆಯಿತು. ಧ್ವಜಾರೋಹಣವನ್ನು ಶಾಲೆಯ ಹಿರಿಯ ವಿದ್ಯಾರ್ಥಿ ತುಳಸೀದಾಸ್, ಜೂನಿಯರ್ ಇಂಜಿನಿಯರ್ ನಗರಸಭೆ ಉಳ್ಳಾಲ ಇವರು ನೆರವೇರಿಸಿದರು. ಬಳಿಕ ವಿಜ್ಞಾನ ಲ್ಯಾಬ್ ಉದ್ಘಾಟನೆಯನ್ನು ಭಾರತೀ ಜನಾರ್ಧನ ಸೇವಾ ಟ್ರಸ್ಟ್ ಕಾರ್ಯದರ್ಶಿ ಸುಬ್ರಾಯ ಪೈ ನೆರವೇರಿಸಿ ಬಾಲ್ಯದಲ್ಲಿಯೇ ವಿದ್ಯಾರ್ಥಿಗಳು ವಿಜ್ಞಾನದಲ್ಲಿ ಆಸಕ್ತಿಯನ್ನು ಹೊಂದಿ ನಮ್ಮ ಶಾಲೆಯಿಂದಲೂ ಚಂದ್ರಯಾನ, ಸೂರ್ಯಯಾನ ಮಾಡುವಂತಹ ವಿದ್ಯಾರ್ಥಿಗಳು ಈ ಶಾಲೆಯ ಲ್ಯಾಬ್ನಿಂದ ಹೊರಬರುವಂತಾಗಲಿ ಎಂದು ಹಾರೈಸಿದರು.
ಬಾಲವನ ಉದ್ಘಾಟಿಸಿದ ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷೆ ಜಲಜಾಕ್ಷಿ ಮಾತನಾಡಿ ಶುಭಹಾರೈಸಿದರು. ವಿಟ್ಲ ರೋಟರಿ ಕ್ಲಬ್ ಅಧ್ಯಕ್ಷ ಕಿರಣ್ ಕುಮಾರ್ ಬಹುಮಾನ ವಿತರಣಾ ಕಾರ್ಯಕ್ರಮವನ್ನು ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಭವಾನಿ ರೈ ಕೊಲ್ಯ, ಅಧ್ಯಕ್ಷರು ಚಂದಳಿಕೆ ವಿದ್ಯಾವರ್ಧಕ ಸಂಘ ಚಂದಳಿಕೆ, ಸಂತೋಷ್ ಕುಮಾರ್ ಶೆಟ್ಟಿ, ಅಧ್ಯಕ್ಷರು, ಜೆಸಿಐ, ವಿಟ್ಲ, ಸುಮತಿ ದೇಜಪ್ಪ ಅಧ್ಯಕ್ಷರು ಎಸ್.ಡಿ.ಎಂ.ಸಿ ಚಂದಳಿಕೆ ಶಾಲೆ, ಬಿಂದು ಸಿ.ಆರ್.ಪಿ ವಿಟ್ಲ, ಜಾಯ್ ಡಿಸೋಜಾ, ಸದಸ್ಯರು ಚಂದಳಿಕೆ ವಿದ್ಯಾವರ್ಧಕ ಸಂಘ ಚಂದಳಿಕೆ, ಥೆರೇಸಾ ಸದಸ್ಯರು ಚಂದಳಿಕೆ ವಿದ್ಯಾವರ್ಧಕ ಸಂಘ ಚಂದಳಿಕೆ, ಲ. ಸಂಜೀವ ಪೂಜಾರಿ, ಸದಸ್ಯರು ಚಂದಳಿಕೆ ವಿದ್ಯಾವರ್ಧಕ ಸಂಘ ಚಂದಳಿಕೆ, ತುಳಸೀದಾಸ್, ಜೂನಿಯರ್ ಇಂಜಿನಿಯರ್ ನಗರಸಭೆ ಉಳ್ಳಾಲ ಮತ್ತಿತರರು ಉಪಸ್ಥಿತರಿದ್ದರು. ಬಹುಮಾನ ವಿತರಣೆಯನ್ನು ಶಾಲಾ ಶಿಕ್ಷಕರಿಯರು ನೆರವೇರಿಸಿದರು.
ಕಾರ್ಯಕ್ರಮದ ನಿರ್ವಹಣೆ ದೈಹಿಕ ಶಿಕ್ಷಕ ಸುರೇಶ್ ಶೆಟ್ಟಿ ನೆರವೇರಿಸಿದರು. ಶಾಲಾ ಮುಖ್ಯೋಪಾಧ್ಯಾಯ ಬಿ ವಿಶ್ವನಾಥ ಗೌಡ ಸ್ವಾಗತಿಸಿದರು. ವೆಂಕಟೇಶ ಪಿ ವಂದಿಸಿದರು.