ಸ್ಯಾಂಡಲ್ ವುಡ್ ಖ್ಯಾತ ನಟಿ ರಮ್ಯಾ ಅವರು ಎರಡು ದಿನಗಳ ಹಿಂದೆಯಷ್ಟೇ ತಮ್ಮ ನೆಚ್ಚಿನ ನಾಯಿ ಚಾಂಪ್ನನ್ನು ಕಳೆದುಕೊಂಡಿದ್ದಾರೆ. ಮುದ್ದಿನ ನಾಯಿಯನ್ನು ಕಳೆದುಕೊಂಡ ದುಃಖದಲ್ಲಿರುವ ರಮ್ಯಾ, ಮನೆಯಿಂದ ಆಚೆ ಬಾರದಷ್ಟು ನೋವಿನಲ್ಲಿದ್ದಾರೆ. ಹೀಗಾಗಿಯೇ ಎರಡು ದಿನಗಳಿಂದ ಅವರು ಯಾವುದೇ ಅಭ್ಯರ್ಥಿ ಪರ ಪ್ರಚಾರಕ್ಕೆ ಹೋಗಿಲ್ಲ. ಮನೆಯಲ್ಲೇ ಉಳಿದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ತಮ್ಮ ಮುದ್ದಿನ ಶ್ವಾನ ನಾಪತ್ತೆ ವಿಷಯ ತಿಳಿಯುತ್ತಿದ್ದಂತೆ ರಮ್ಯ ಕಣ್ಣೀರು ಹಾಕಿದ್ದರು. ವಿಜಯಪುರ ಜಿಲ್ಲೆಯ ಬಬಲೇಶ್ವರದಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದ್ದಾಗ ಈ ಮಾಹಿತಿ ಸಿಗುತ್ತಿದ್ದಂತೆ ತೀವ್ರ ನೊಂದುಕೊಂಡಿದ್ದ ರಮ್ಯಾ, ತಕ್ಷಣ ತಮ್ಮ ಚುನಾವಣಾ ಪ್ರಚಾರ ಕಾರ್ಯವನ್ನು ಮೊಟಕುಗೊಳಿಸಿ ಬೆಂಗಳೂರಿಗೆ ಆಗಮಸಿದ್ದರು. ಅವರು ಬೆಂಗಳೂರಿಗೆ ಬರುವಷ್ಟರಲ್ಲಿ ಚಾಂಪ್ ನಿಧನ ಹೊಂದಿದ ಸುದ್ದಿ ಅವರಿಗೆ ಮತ್ತಷ್ಟು ಆಘಾತ ತರಿಸಿತ್ತು.ಇನ್ನೂ ಪುತ್ತೂರಿನಲ್ಲಿ ನಡೆದ ಕಾಂಗ್ರೇಸ್ನ ರೋಡ್ ಶೋಗೆ ಆಗಮಿಸಿರಲಿಲ್ಲ.
ಶನಿವಾರ ರಮ್ಯಾ ವಾಸವಿದ್ದ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ತಾಜ್ ವೆಸ್ಟ್ ಎಂಡ್ ಹೋಟೆಲ್ ನಿಂದ ನಾಯಿ ಕಾಣೆಯಾಗಿದೆ ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ತನ್ನ ನೆಚ್ಚಿನ ನಾಯಿಯನ್ನು ಹುಡುಕಿಕೊಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಅದಾದ ಕೆಲವು ಹೊತ್ತಿನ ನಂತರ ಚಾಂಪ್ ಇನ್ನಿಲ್ಲ ಎಂದು ಅವರೇ ಬಹಿರಂಗ ಪಡಿಸಿದರು.