Thursday, May 16, 2024
spot_imgspot_img
spot_imgspot_img

ಕೊಪ್ಪಳ: ಚಿರತೆ ದಾಳಿಗೆ ಯುವಕ ಬಳಿ!

- Advertisement -G L Acharya panikkar
- Advertisement -

ಕೊಪ್ಪಳ: ಜಿಲ್ಲೆಯ ಆನೆಗುಂದಿ ಭಾಗದಲ್ಲಿ ಚಿರತೆ ಮತ್ತೆ ದಾಳಿ ನಡೆಸಿದ್ದು, ದಾಳಿಗೆ ತುತ್ತಾದ ಯುವಕ ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದಾನೆ. ಕರಿಯಮ್ಮನಗಡ್ಡಿಯ ರಾಘು ನಾಯಕ್​(19) ಚಿರತೆ ದಾಳಿಗೆ ಬಲಿಯಾದ ಯುವಕ.

ದನ ಕಾಯಲು ಕುರುಚಲು ಬೆಟ್ಟಕ್ಕೆ ತೆರಳಿದ್ದ ಯುವಕನ ಮೇಲೆ ಚಿರತೆ ದಾಳಿ ಮಾಡಿದೆ. ಈ ಮೊದಲು ದೇವಾಲಯದ ಅರ್ಚಕರೊಬ್ಬರ ಮೇಲೆ ದಾಳಿ ನಡೆಸಿದ್ದು, ಅವರೂ ಮೃತಪಟ್ಟಿದ್ದರು. ಪದೇ ಪದೇ ಚಿರತೆ ದಾಳಿಯಿಂದ ಬೇಸತ್ತ ಗ್ರಾಮಸ್ಥರು ನಿನ್ನೆ ರಾತ್ರಿಯವರೆಗೂ ಪ್ರತಿಭಟನೆ ಮಾಡಿದ್ರು.ಸ್ಥಳಕ್ಕಾಗಮಿಸಿದ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿಯವರನ್ನು ಕರಿಯಮ್ಮನಗಡ್ಡಿಯ ಗ್ರಾಮಸ್ಥರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಟಯರ್​ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿ, ಶಾಸಕರ ವಿರುದ್ಧ ಧಿಕ್ಕಾರ ಕೂಗಿ ಅಕ್ರೋಶ ವ್ಯಕ್ತಪಡಿಸಿದ್ರು.

ಸಚಿವ ಆನಂದ್​ ಸಿಂಗ್​ ವಿರುದ್ಧವೂ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿರೋ ಹಿನ್ನೆಲೆಯಲ್ಲಿ, ಇಂದು ಸಚಿವರು ಪ್ರದೇಶಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಪ್ರತಿಭಟನೆಯ ಮಧ್ಯಪ್ರವೇಶಿಸಿದ ಪೊಲೀಸರು ಗ್ರಾಮಸ್ಥರನ್ನು ಸಮಾಧಾನಪಡಿಸಿ ಯುವಕನ ಮೃತದೇಹ ತಗೆದುಕೊಂಡು ಹೋಗಿದ್ದಾರೆ.

- Advertisement -

Related news

error: Content is protected !!