ಕೊಪ್ಪಳ: ಜಿಲ್ಲೆಯ ಆನೆಗುಂದಿ ಭಾಗದಲ್ಲಿ ಚಿರತೆ ಮತ್ತೆ ದಾಳಿ ನಡೆಸಿದ್ದು, ದಾಳಿಗೆ ತುತ್ತಾದ ಯುವಕ ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದಾನೆ. ಕರಿಯಮ್ಮನಗಡ್ಡಿಯ ರಾಘು ನಾಯಕ್(19) ಚಿರತೆ ದಾಳಿಗೆ ಬಲಿಯಾದ ಯುವಕ.
ದನ ಕಾಯಲು ಕುರುಚಲು ಬೆಟ್ಟಕ್ಕೆ ತೆರಳಿದ್ದ ಯುವಕನ ಮೇಲೆ ಚಿರತೆ ದಾಳಿ ಮಾಡಿದೆ. ಈ ಮೊದಲು ದೇವಾಲಯದ ಅರ್ಚಕರೊಬ್ಬರ ಮೇಲೆ ದಾಳಿ ನಡೆಸಿದ್ದು, ಅವರೂ ಮೃತಪಟ್ಟಿದ್ದರು. ಪದೇ ಪದೇ ಚಿರತೆ ದಾಳಿಯಿಂದ ಬೇಸತ್ತ ಗ್ರಾಮಸ್ಥರು ನಿನ್ನೆ ರಾತ್ರಿಯವರೆಗೂ ಪ್ರತಿಭಟನೆ ಮಾಡಿದ್ರು.ಸ್ಥಳಕ್ಕಾಗಮಿಸಿದ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿಯವರನ್ನು ಕರಿಯಮ್ಮನಗಡ್ಡಿಯ ಗ್ರಾಮಸ್ಥರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಟಯರ್ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿ, ಶಾಸಕರ ವಿರುದ್ಧ ಧಿಕ್ಕಾರ ಕೂಗಿ ಅಕ್ರೋಶ ವ್ಯಕ್ತಪಡಿಸಿದ್ರು.
ಸಚಿವ ಆನಂದ್ ಸಿಂಗ್ ವಿರುದ್ಧವೂ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿರೋ ಹಿನ್ನೆಲೆಯಲ್ಲಿ, ಇಂದು ಸಚಿವರು ಪ್ರದೇಶಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಪ್ರತಿಭಟನೆಯ ಮಧ್ಯಪ್ರವೇಶಿಸಿದ ಪೊಲೀಸರು ಗ್ರಾಮಸ್ಥರನ್ನು ಸಮಾಧಾನಪಡಿಸಿ ಯುವಕನ ಮೃತದೇಹ ತಗೆದುಕೊಂಡು ಹೋಗಿದ್ದಾರೆ.