ಟೈಯರ್ ಬ್ಲಾಸ್ಟ್ ಆದ ಟಿಪ್ಪರ್ ಪಲ್ಟಿ ಹೊಡೆದಿದ್ದು, ಒಂದೇ ಕುಟುಂಬದ ಐವರು ಸಾವನ್ನಪ್ಪಿದ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಬಾದರದಿನ್ನಿ ಗ್ರಾಮದಲ್ಲಿ ನಡೆದಿದೆ.
ಮೃತಪಟ್ಟವರನ್ನು ಬಾದರದಿನ್ನಿ ಗ್ರಾಮದ ಯಂಕಪ್ಪ ಶಿವಪ್ಪ ತೋಳಮಟ್ಟಿ (70), ಯಲ್ಲವ್ವ ಯಂಕಪ್ಪ ತೋಳಮಟ್ಟಿ (ಪತ್ನಿ) (60), ಪುಂಡಲೀಕ್ ಯಂಕಪ್ಪ ತೋಳಮಟ್ಟಿ (ಮಗ)(35), ನಾಗವ್ವ ಅಶೋಕ ಬಮ್ಮಣ್ಣವರ (ಯಂಕಪ್ಪ ಅವರ ಮಗಳು) (45), ಅಶೋಕ ನಿಂಗಪ್ಪ ಬಮ್ಮಣ್ಣವರ (ಅಳಿಯ- ಮಗಳ ಗಂಡ) (50) ಎಂದು ಗುರುತಿಸಲಾಗದೆ.
ಟಿಪ್ಪರ್ ವಾಹನದ ಟೈಯರ್ ಬ್ಲಾಸ್ಟ್ ಆಗಿ ಪಾದಚಾರಿಗಳ ಮೇಲೆ ಉರುಳಿದೆ. ಮೃತರೆಲ್ಲರೂ ಹೊಲಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ಬರುತ್ತಿದ್ದರು. ರಸ್ತೆ ಬದಿ ನಡೆದುಕೊಂಡು ಹೋಗುವಾಗ ಗರಸು ತುಂಬಿದ್ದ ಟಿಪ್ಪರ್ನ ಮುಂದಿನ ಟೈಯರ್ ಬ್ಲಾಸ್ಟ್ ಆಗಿದೆ. ನಡೆದುಕೊಂಡ ಹೊರಟಿದ್ದವರ ಮೇಲೆ ಟಿಪ್ಪರ್ ಬಿದ್ದಿದೆ. ಭೀಕರ ದುರಂತದಲ್ಲಿ ಮೃತಪಟ್ಟವರೆಲ್ಲಾ ಒಂದೇ ಕುಟುಂಬದವರಾಗಿದ್ದಾರೆ. ಹೊನ್ಯಾಳ ಬಳಿಯ ರಾಷ್ಟ್ರೀಯ ಹೆದ್ದಾರಿ 218ರಲ್ಲಿ ಈ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಬೀಳಗಿ ಪೊಲೀಸರ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.