Thursday, March 28, 2024
spot_imgspot_img
spot_imgspot_img

ಚಿತ್ರದುರ್ಗ: ರಾಜ್ಯದ ಇತಿಹಾಸದಲ್ಲೇ ಫಸ್ಟ್ -4 ಕೋಟಿ ರೂ. ಮೌಲ್ಯದ ಗಾಂಜಾ ವಶ, ನಾಲ್ವರ ಬಂಧನ

- Advertisement -G L Acharya panikkar
- Advertisement -

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ರಾಂಪುರ ಠಾಣೆಯ ಪೊಲೀಸರು, ನಾಲ್ಕು ಕೋಟಿ ರೂ. ಮೌಲ್ಯದ ಗಾಂಜಾವನ್ನು ವಶಕ್ಕೆ ಪಡೆದು
ಅದನ್ನು ಬೆಳೆದಿದ್ದ ನಾಲ್ವರನ್ನು ಬಂಧಿಸಿದ್ದಾರೆ. ಈ ಮೂಲಕ ಇದು ರಾಜ್ಯದಲ್ಲೇ ದೊಡ್ಡ ಗಾಂಜಾ ಪ್ರಕರಣವಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಜಿ.ರಾಧಿಕಾ, ತಾಲೂಕಿನ ಒಡೆರಹಳ್ಳಿಯಲ್ಲಿಯ 4 ಎಕರೆ 20 ಗುಂಟೆ ಕೃಷಿ ಭೂಮಿಯಲ್ಲಿ ವಿವಿಧ ಬೆಳೆಗಳ ನಡುವೆ ಗಾಂಜಾ ಬೆಳೆಯಲಾಗಿತ್ತು. ಅದು ನಾಲ್ಕು ಕೋಟಿ ಬೆಲೆ ಬಾಳಲಿದೆ ಎಂದರು.

ಗಾಂಜಾ ಬೆಳೆದಿದ್ದ ರುದ್ರೇಶ್ (45), ಮಂಜುನಾಥ್(45), ಜಂಬುನಾಥ್ (50), ಬಿ.ವೈ.ಮಂಜುನಾಥ್ (48) ಎಂಬುವರನ್ನು ಬಂಧಿಸಲಾಗಿದೆ. ಆರೋಪಿಗಳಿಗೆ ಸಹಕಾರ ನೀಡಿದ್ದ ಸುಮಂತ್ ಗೌಡ ತಲೆಮರೆಸಿಕೊಂಡಿದ್ದಾನೆ. ಈಗಾಗಲೇ 150 ಬಂಡಲ್ ಪೈಕಿ ಒಟ್ಟು 9,871 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.

- Advertisement -

Related news

error: Content is protected !!