Monday, April 29, 2024
spot_imgspot_img
spot_imgspot_img

ನಿಡ್ಪಳ್ಳಿ, ಇರ್ದೆ, ಪಾಣಾಜೆ, ಕೊಳ್ತಿಗೆ, ಕೆಯ್ಯೂರು ಗ್ರಾಮಗಳ ದಲಿತ ಕಾಲೋನಿಗಳಿಗೆ ಕಾಂಗ್ರೇಸ್ ಅಭ್ಯರ್ಥಿ ಅಶೋಕ್ ರೈ ಭೇಟಿ

- Advertisement -G L Acharya panikkar
- Advertisement -

ಕಾಂಗ್ರೆಸ್ ಗೆಲ್ಲಿಸಿ ನಿಮ್ಮ ಮನೆಗೆ ಹಕ್ಕು ಪತ್ರ ತಲುಪಿಸುವ ಕೆಲಸ ಮಾಡುತ್ತೇನೆ: ಅಶೋಕ್ ಕುಮಾರ್ ರೈ

ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈಯವರು ಕಳೆದ ಮೂರು ದಿನಗಳಿಂದ ಕ್ಷೇತ್ರದಾದ್ಯಂತ ಕಾಲೋನಿಗಳಿಗೆ ಕಾಲ್ನಡಿಗೆ ಮೂಲಕ ಮತಯಾಚನೆ ಮಾಡುತ್ತಿದ್ದಾರೆ. ಭಾನುವಾರದಂದು ನಿಡ್ಪಳ್ಳಿ, ಇರ್ದೆ, ಪಾಣಾಜೆ,ಕೊಳ್ತಿಗೆ, ಕೆಯ್ಯೂರು ಗ್ರಾಮಗಳ ದಲಿತ ಕಾಲೊನಿಗಳಿಗೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಕಾಲೋನಿ ನಿವಾಸಿಗಳು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. ಹೆಚ್ಚಿನ ಮನೆಗಳಿಗೆ ಮನೆಯ ಅಡಿಸ್ಥಳದ ದಾಖಲೆ ಇಲ್ಲದ ಬಗ್ಗೆ ಮತ್ತು೯೪ ಸಿ ಅರ್ಜಿ ಹಾಕಿದರೂ ಹಕ್ಕು ಪತ್ರ ನೀಡದೆ ಇರುವ ಬಗ್ಗೆ ರೈ ಯವರಗಮನಕ್ಕೆ ತಂದರು. ಅಳಲು ತೋಡಿಕೊಂಡ ಕಾಲನಿ ನಿವಾಸಿಗಳು ” ೯೪ ಸಿ ಹಕ್ಕು ಪತ್ರ ನೀಡುವುದಾಗಿ ನಮ್ಮಿಂದ ಹಣ ತೆಗೆದುಕೊಂಡಿದ್ದಾರೆ. ಕಳೆದ ಮೂರುವರ್ಷಗಳಿಂದ ಹಕ್ಕ ಪತ್ರ ನೀಡದೆ ವಂಚನೆಮಾಡಿದ್ದಾರೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಅಶೋಕ್ ಕುಮಾರ್ ರೈ ಮಾತನಾಡಿ ಕಾಂಗ್ರೆಸ್ ಗೆಲ್ಲಿಸಿ ನಿಮ್ಮಮನೆಗೆ ಹಕ್ಕು ಪತ್ರ ತಲುಪಿಸುವ ಕೆಲಸ ಮಾಡುತ್ತೇನೆ. ಯಾರಿಗಾದರೂ ಹಣ ಕೊಟ್ಟಿದ್ದರೆ ಅದನ್ನು ವಾಪಸ್ ತೆಗೆದುಕೊಳ್ಳಿ ಯಾರಿಗೂ ಹಣಕೊಡಬೇಡಿ ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ, ಕೃಷ್ಣಪ್ರಸಾದ್ ಆಳ್ವ ಸೇರಿದಂತೆ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

- Advertisement -

Related news

error: Content is protected !!