- Advertisement -
- Advertisement -
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಕಚೇರಿ ಲಾಕರ್ನಲ್ಲಿದ್ದ ಹಣ ಕಳ್ಳತನವಾದ ಘಟನೆ ಹುಬ್ಬಳ್ಳಿ ಮತ್ತು ಧಾರವಾಡ ನಡುವೆ ಇರುವ ರಾಯಾಪುರ ಬಡಾವಣೆ ಕಚೇರಿಯಲ್ಲಿ ನಡೆದಿದೆ.
ವಿಜಯದಶಮಿ ಹಿನ್ನಲೆ ಬ್ಯಾಂಕ್ ರಜೆ ಸ್ವಸಹಾಯ ಸಂಘದ ಹಣ ಕಛೇರಿಯಲ್ಲೇ ಇತ್ತು, ಇದನ್ನೇ ಅವಕಾಶ ಮಾಡಿಕೊಂಡಿರುವ ಖದೀಮರು ಕಚೇರಿಯ ಶೌಚಾಲಯದ ಕಿಟಕಿ ಒಡೆದು ಲಾಕರ್ನಲ್ಲಿಟ್ಟಿದ್ದ ಬರೊಬ್ಬರಿ 1.24 ಕೋಟಿ ಹಣವನ್ನು ಕದ್ದು ಪರಾರಿಯಾಗಿದ್ದಾರೆ.
ಈ ಘಟನೆಗೆ ಸಂಬಂಧಪಟ್ಟಂತೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಧಾರವಾಡ ವಿದ್ಯಾಗಿರಿ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
- Advertisement -