Tuesday, May 14, 2024
spot_imgspot_img
spot_imgspot_img

ಮಗನ ಸಾವಿನ ನೋವಿನಿಂದ ನೊಂದು ಪೋಷಕರು ಆತ್ಮಹತ್ಯೆಗೆ ಶರಣು

- Advertisement -G L Acharya panikkar
- Advertisement -
This image has an empty alt attribute; its file name is balavikas-866x1024.jpg

ಮಗನ ಸಾವಿನ ನೋವಿನಿಂದ ಹೊರಬರಲಾಗದೇ ಪೋಷಕರು ಹಾಸನದ ಅರಕಲಗೂಡು ತಾಲೂಕಿನ ರಾಮನಾಥಪುರ ಗ್ರಾಮದ ಬಳಿ ಕೃಷ್ಣರಾಜ ನಾಲೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನದಲ್ಲಿ ನಡೆದಿದೆ.

ಮೃತರು ಪಿರಿಯಾಪಟ್ಟಣ ಮೂಲದ ರಂಗಸ್ವಾಮಿ(49) ಮತ್ತು ಅವರ ಪತ್ನಿ ಕನಕ(45) ಎಂದು ತಿಳಿದು ಬಂದಿದೆ.

ಕೆಲ ವರ್ಷದ ಹಿಂದೆ ಮಗ ಮೃತಪಟ್ಟಿದ್ದನು. ಮಗನ ಸಾವಿನ ಬಳಿಕ ದಂಪತಿ ಖಿನ್ನತೆಗೆ ಒಳಗಾಗಿದ್ದರು. ಕೊನೆಗೆ ಕಠಿಣ ನಿರ್ಧಾರ ಮಾಡಿದ್ದು ಇಬ್ಬರು ನಾಲೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದೆ.
ಘಟನೆ ಕುರಿತು ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!