- Advertisement -
- Advertisement -
ಕಂಬಳಬೆಟ್ಟು: ಸಿದ್ದಿವಿನಾಯಕ ಯುವಕ ಮಂಡಲದ ಆರನೇ ಸೇವಾಯೋಜನೆಯಾಗಿ,ನಿರ್ಮಾಣ ಹಂತದಲ್ಲಿರುವ ಕಾರಣಿಕ ಕ್ಷೇತ್ರ ಶ್ರೀ ವೈದ್ಯನಾಥ, ಮಲರಾಯ ಮತ್ತು ಸಪರಿವಾರ ದೈವಗಳ ಸನ್ನಿಧಿ ಮಲರಾಯ ಜೇರ-ಧರ್ಮನಗರ ಇಲ್ಲಿನ ಮುಂದಿನ ಹಂತದ ಕೆಲಸಕಾರ್ಯಗಳಿಗೆ ಸಹಕಾರ ನೀಡುವ ನಿಟ್ಟಿನಲ್ಲಿ ಯುವಕ ಮಂಡಲದ ವತಿಯಿಂದ ಸೇವಾನಿಧಿ ವಿತರಣೆಯು ಇಂದು ಬೆಳಿಗ್ಗೆ ದೈವಸ್ಥಾನದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ವಿಟ್ಲ ಸೀಮೆಯ ಗುರಿಕ್ಕಾರರಾದ ಕೆ. ಟಿ. ವೆಂಕಟೇಶ್ವರ ನೂಜಿ, ದೈವಸ್ಥಾನ ಸಮಿತಿಯ ಅಧ್ಯಕ್ಷರಾದ ಸತೀಶ್ ಶೆಟ್ಟಿ ಮೂಡೈಮಾರು,ಯುವಕ ಮಂಡಲದ ಗೌರವಾಧ್ಯಕ್ಷರಾದ ಜನಾರ್ಧನ ಕಾರ್ಯಡಿ, ಅಧ್ಯಕ್ಷರಾದ ರಂಜಿತ್ ನೆಕ್ಕರೆ, ಮತ್ತು ಯುವಕ ಮಂಡಲದ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
- Advertisement -